Tragic: ಫೋಟೋ ತೆಗೆಯುವ ವೇಳೆ ನದಿಗೆ ಬಿದ್ದ ನವದಂಪತಿ; ರಕ್ಷಿಸಲು ಹೋದ ಸಂಬಂಧಿಕನೂ ಮೃತ್ಯು
ಸಂಬಂಧಿಕನ ಮನೆಗೆ ಬಂದು, ಸಂಜೆ ವೇಳೆ ತಿರುಗಾಟಕ್ಕೆ ತೆರಳಿದ್ದ ದಂಪತಿ
Team Udayavani, Jul 31, 2023, 3:50 PM IST
ತಿರುವನಂತಪುರಂ: ಫೋಟೋ ತೆಗೆಯಲು ನದಿ ಬಂಡೆಯ ಬಳಿ ತೆರಳಿದ್ದ ನವದಂಪತಿ ಸೇರಿ ಮೂವರು ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ತಿರುವನಂತಪುರಂನಲ್ಲಿರುವ ಪಳ್ಳಿಕ್ಕಲ್ ನದಿಯಲ್ಲಿ ನಡೆದಿರುವುದು ವರದಿಯಾಗಿದೆ.
ಕೊಲ್ಲಂ ಮೂಲದ ಸಿದ್ದಿಕ್ (28),ಆಯೂರು ನಿವಾಸಿ ನೌಫಿಯಾ ನೌಶಾದ್ (21) ಹಾಗೂ ಅವರ ಸಂಬಂಧಿ ಅನ್ಸಲ್ ಖಾನ್ (19) ಮೃತರು.
ಜು.16 ರಂದು ಸಿದ್ದಿಕ್ -ನೌಫಿಯಾ ನೌಶಾದ್ ಅವರ ವಿವಾಹ ನಡೆದಿತ್ತು. ದಂಪತಿಯ ಸಂಬಂಧಿಯಾದ ಅನ್ಸಲ್ ಖಾನ್ ಅವರ ಮನೆಗೆ ಶನಿವಾರ (ಜು.29 ರಂದು) ಮನೆಗೆ ಬಂದಿದ್ದರು. ಇದೇ ವೇಳೆ ಮನೆ ಪಕ್ಕದ ನದಿ ತೀರದ ಪ್ರದೇಶಕ್ಕೆ ಸುತ್ತಾಟಕ್ಕೆಂದು ಅನ್ಸಲ್ ಅವರೊಂದಿಗೆ ನವದಂಪತಿ ತೆರಳಿದ್ದಾರೆ.
ಈ ವೇಳೆ ಫೋಟೋ ತೆಗೆಯಲು ಸಿದ್ದಿಕ್ -ನೌಫಿಯಾ ಪೋಸ್ ಕೊಟ್ಟಿದ್ದಾರೆ. ಸೆಲ್ಫಿ ಪೋಸ್ ಹಾಗೂ ಇತರ ಪೋಸ್ ನಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವಾಗ ಬಂಡೆಯಿಂದ ಜಾರಿ ನದಿಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಅನ್ಸಲ್ ಇಬ್ಬರನ್ನು ರಕ್ಷಣೆ ಮಾಡಲು ತಾನೂ ಕೂಡ ನದಿಗೆ ಹಾರಿದ್ದಾನೆ. ದುರದೃಷ್ಟವಶಾತ್ ಮೂವರು ಕೂಡ ನೀರಿನ ಸೆಳೆತಕ್ಕೆ ಪ್ರಾಣ ತೆತ್ತಿದ್ದಾರೆ.
ನದಿ ತೀರದ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ, ನದಿಯ ಬಂಡೆಯ ಪಕ್ಕದಲ್ಲಿದ್ದ ಚಪ್ಪಲಿ ಹಾಗೂ ಎರಡು ಬೈಕ್ ಗಳನ್ನು ನೋಡಿ ಶಂಕೆಯಿಂದ ಜನರನ್ನು ಕರೆದಿದ್ದಾನೆ. ಅಗ್ನಿಶಾಮಕದಳದವರು ಅದೇ ದಿನ ಸಂಜೆ ಅನ್ಸಲ್ ಅವರ ಮೃತದೇಹವನ್ನು ಹೊರ ತೆಗೆದಿದ್ದು,ಒಂದು ದಿನದ ಬಳಿಕ ನವದಂತಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು