ವಾಜಪೇಯಿಯನ್ನು ಭೇಟಿಯಾಗಿ ಆಶೀರ್ವಾದ ಕೋರಿದ ರಾಮ ನಾಥ್ ಕೋವಿಂದ್
Team Udayavani, Jun 22, 2017, 12:33 PM IST
ಹೊಸದಿಲ್ಲಿ : ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ ನಾಥ್ ಕೋವಿಂದ್ ಅವರಿಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಕೋರಿದರು.
ವಾಜಪೇಯಿ ನಿವಾಸದಲ್ಲಿನ ಭೇಟಿಯ ಸಂದರ್ಭದಲ್ಲಿ ಕೋವಿಂದ್ ಅವರ ಜತೆಗೆ ಅವರ ಪತ್ನಿ ಕೂಡ ಇದ್ದರು.
ಕೋವಿಂದ್ ಅವರು ಈ ಮೊದಲು ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನೂ ಭೇಟಿಯಾಗಿದ್ದರು.
ಬಿಹಾರದ ರಾಜ್ಯಪಾಲರಾಗಿದ್ದ ರಾಮ ನಾಥ್ ಕೋವಿಂದ್ ಅವರನ್ನು ಎನ್ಡಿಯ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಈ ವಾರದ ಆದಿಯಲ್ಲಿ ಆಯ್ಕೆ ಮಾಡಿತ್ತು. ಕೋವಿಂದ್ ಅವರು ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ವಕೀಲ ವೃತ್ತಿ ನಡೆಸಿದವರಾಗಿದ್ದಾರೆ.