ಕಳ್ಳಸಾಗಣೆ; ಸಿಂಹದ ಮರಿ, ಮೂರು ಅಪರೂಪದ ಬಿಳಿ ತಲೆ ಲಂಗೂರ್ ರಕ್ಷಣೆ!
Team Udayavani, Jun 1, 2019, 11:13 AM IST
ಕೋಲ್ಕತಾ:ಪುಟ್ಟ ಸಿಂಹದ ಮರಿ ಹಾಗೂ ಅಪರೂಪದ ಬಿಳಿ ತಲೆಯ ಮೂರು ಲಂಗೂರ್ ಗಳನ್ನು ರಕ್ಷಿಸಿರುವ ಘಟನೆ ಉತ್ತರ ಕೋಲ್ಕತಾದ ಬೆಲ್ಗೋರಿಯಾ ಎಕ್ಸ್ ಪ್ರೆಸ್ ವೇಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ವನ್ಯಜೀವಿ ಕ್ರೈಂ ಕಂಟ್ರೋಲ್ ಬ್ಯೂರೋ(ಡಬ್ಲ್ಬುಸಿಸಿಬಿ), ವನ್ಯಜೀವಿ ಕ್ರೈಂ ಕಂಟ್ರೋಲ್ ವಿಭಾಗ ಮತ್ತು ಪಶ್ಚಿಮಬಂಗಾಳ ಅರಣ್ಯ ಡೈರೆಕ್ಟೋರೇಟ್ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಮಹೀಂದ್ರ ಸ್ಕಾರ್ಪಿಯೋ ಸಮೀಪದ ಕೇಂದ್ರೀಯ ವಿಹಾರ್ ಹೌಸಿಂಗ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ ಸಿಂಹದ ಮರಿ ಹಾಗೂ ಮೂರು ಲಂಗೂರ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಪ್ಯಾಂಥೆರಾ ಲಿಯೋ ಜಾತಿಗೆ ಸೇರಿದ ಸಿಂಹದ ಮರಿ ಹಾಗೂ ಮೂರು ಅಪರೂಪದ ಬಿಳಿ ತಲೆಯ ಲಂಗೂರ್ ಗಳು ಇದ್ದಿದ್ದು, ಅವುಗಳಲ್ಲಿ ಎರಡು ದೊಡ್ಡದು, ಒಂದು ಮರಿ ಸೇರಿತ್ತು. ಜಂಟಿ ಕಾರ್ಯಾಚರಣೆಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವನ್ಯಜೀವಿ ಕ್ರೈಂ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ತಿಳಿಸಿದ್ದಾರೆ.
ವನ್ಯಜೀವಿಯನ್ನು ಕಾನೂನುಬಾಹಿರವಾಗಿ ಅಕ್ರಮ ಸಾಗಾಟ ಮಾಡಲು ಯತ್ನಿಸುತ್ತಿದ್ದ ವಾಸೀಂ ರಹಮಾನ್ (29ವರ್ಷ), ವಾಜೀದ್ ಅಲಿ (36ವರ್ಷ) ಮತ್ತು ಮೊಹಮ್ಮದ್ ಗುಲಾಮ್ ಗೌಸ್ (27) ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಈ ಪ್ರಾಣಿಗಳನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮೂಲಕ ತಂದಿದ್ದು, ಅದನ್ನು ಮುಂಬೈಗೆ ಸಾಗಿಸಲು ಸಿದ್ದತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ವಶಕ್ಕೆ ಪಡೆದ ಸಿಂಹದ ಮರಿ ಮತ್ತು ಲಂಗೂರ್ ಗಳನ್ನು ತಾತ್ಕಾಲಿಕವಾಗಿ ಸಾಲ್ಟ್ ಲೇಕ್ ರಕ್ಷಣಾ ಸೆಂಟರ್ ಗೆ ಕಳುಹಿಸಲಾಗಿದ್ದು, ಬಳಿಕ ಅವುಗಳನ್ನು ಅಲಿಪೋರ್ ಝೂಗೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ