Love bites: ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿ, ಹಾವು ಕಚ್ಚಿಸಿ ಪ್ರಿಯಕರನ ಕೊಲೆಗೈದ ಪ್ರಿಯತಮೆ
Team Udayavani, Jul 19, 2023, 9:45 AM IST
Representative image
ಡೆಹ್ರಾಡೂನ್: ಪ್ರಿಯತಮೆಯೊಬ್ಬಳು ಹಾವು ಕಚ್ಚಿಸಿ ಪ್ರಿಯಕರನನ್ನು ಕೊಲೆಗೈದಿರುವ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ.
ಜು.15 ರಂದು ಹಲ್ದ್ವಾನಿಯ ತೀನ್ ಪಾನಿ ಪ್ರದೇಶದಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯ ಬ್ಯುಸಿನೆಸ್ ಮ್ಯಾನ್ ಅಂಕಿತ್ ಚೌಹಾಣ್ ಎಂಬಾತ ನಾಪತ್ತೆಯಾಗಿರುವ ಕುರಿತು ಆತನ ಮನೆಯವರು ದೂರು ನೀಡಿದ್ದರು. ತೀನ್ ಪಾನಿ ಪ್ರದೇಶದಲ್ಲಿ ಸಿಕ್ಕ ಮೃತದೇಹ ಅಂಕಿತ್ ಅವರದೆಂದು ಆತನ ಮನೆಯವರು ಹೇಳಿದ್ದಾರೆ.
ಅಂಕಿತ್ ಅವರ ಕಾಲಿನಲ್ಲಿ ಹಾವು ಕಚ್ಚಿರುವ ಗುರುತೊಂದು ಇತ್ತು. ಪೊಲೀಸರಿಗೆ ಇದೊಂದು ಕೊಲೆ ಪ್ರಕರಣವೆಂದು ವಿಚಾರಣೆ ವೇಳೆ ಗೊತ್ತಾಗಿತ್ತು. ತನಿಖೆ ನಡೆಸಿ ಹಾವಾಡಿಗನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿದ ವಕೀಲರಿಂದ ಬ್ರಿಜ್ ಭೂಷಣ್ ಪರ ವಾದ
ಈ ಸಂಬಂಧ ಇನ್ನಷ್ಟು ವಿಚಾರಣೆ ನಡೆಸಿದಾ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವ ಬಗ್ಗೆ ಗೊತ್ತಾಗಿದೆ.
ಪ್ರಿಯಕರನನ್ನು ಕೊಲ್ಲಲು ಹಾವು ಕಚ್ಚಿಸಿದಳು.. ಅಂಕಿತ್ ಕಳೆದ ಕೆಲ ಸಮಯದಿಂದ ಡಾಲಿ( ಮಾಹಿ) ಯನ್ನು ಪ್ರೀತಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಮಾಹಿ ಅಂಕಿತ್ ನಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಯಾವಾಗ ಹಣ ನೀಡಲಿಲ್ವೋ ಆಗ ಮಾಹಿ ಅಂಕಿತ್ ನಿಂದ ದೂರವಾಗಲು ತೀರ್ಮಾನಿಸಿದ್ದಾಳೆ. ಆದರೆ ಅಂಕಿತ್ ಮಾತ್ರ ಆಕೆಯನ್ನೇ ಹಿಂಬಾಲಿಸುತ್ತಿದ್ದ. ಇದೇ ಕಾರಣದಿಂದ ಮಾಹಿ ಹಾವಾಡಿಗನನ್ನು ಕರೆಸಿ ಅಂಕಿತ್ ನನ್ನು ಹಾವು ಕಚ್ಚಿಸಿ ಕೊಲೆಗೈಯಲು ಪ್ಲ್ಯಾನ್ ಮಾಡಿದ್ದಾಳೆ. ಅದರಂತೆ ಅಂಕಿತ್ ಕಾಲಿಗೆ ಹಾವು ಕಚ್ಚಿಸಿ ಅವನ ಕಥೆಯನ್ನು ಮುಗಿಸಿದ್ದಾಳೆ ಎಂದು ನೈನಿತಾಲ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಭಟ್ ಅವರು ಘಟನೆ ಬಗ್ಗೆ ವಿವರಿಸಿದ್ದಾರೆ.
ಸದ್ಯ ಮಾಹಿ ಮೂವರು ಆರೋಪಿಗಳೊಂದಿಗೆ ತಲೆಮರೆಸಿಕೊಂಡಿದ್ದಾಳೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ