3 ಲಕ್ಷ ತ.ನಾ.ರೈತರ ಸಾಲ ಮನ್ನಾ, ವಸೂಲಿ ಕ್ರಮಕ್ಕೆ ತಡೆ: ಹೈಕೋರ್ಟ್
Team Udayavani, Apr 4, 2017, 3:13 PM IST
ಚೆನ್ನೈ : “ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು; ಇದರ ಲಾಭವನ್ನು ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಸೀಮಿತ ಮಾಡಕೂಡದು’ ಎಂದು ಮದ್ರಾಸ್ ಹೈಕೋರ್ಟ್ ಇಂದು ಮಂಗಳವಾರ ತಮಿಳು ನಾಡು ಸರಕಾರಕ್ಕೆ ಹೇಳಿದೆ.
ಬೆಳೆ ಸಾಲದ ಸುಸ್ತಿಗಾರರಾಗಿರುವ ಯಾವುದೇ ರೈತನ ವಿರುದ್ಧ ವಸೂಲಾತಿ ಕ್ರಮ ನಡೆಸಕೂಡದು ಎಂದು ನ್ಯಾಯಾಲಯವು ಅಧಿಕಾರಿಗಳನ್ನು ನಿರ್ಬಂಧಿಸಿದೆ.
ಮದ್ರಾಸ್ ಹೈಕೋರ್ಟ್ನ ಈ ತೀರ್ಪಿನಿಂದಾಗಿ ತಮಿಳು ನಾಡು ಸರಕಾರಕ್ಕೆ 1,980 ಕೋಟಿ ರೂ.ಗಳ ಹೆಚ್ಚುವರಿ ಹಣಕಾಸು ಹೊರೆ ಉಂಟಾಗಲಿದೆ. ಆದರೆ ನ್ಯಾಯಾಲಯದ ಈ ಆದೇಶದಿಂದ “ಇತರ ವರ್ಗ’ಕ್ಕೆ ಸೇರುವ ಸುಮಾರು 3.01 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
2016ರ ಜೂನ್ 28ರಂದು ಕೋರ್ಟ್ ನೀಡಿದ್ದ ಇದೇ ರೀತಿಯ ಆದೇಶದಿಂದ ತಮಿಳು ನಾಡು ಸರಕಾರಕ್ಕೆ 5,780 ಕೋಟಿ ರೂ. ಹೊರೆ ಬಿದ್ದಿತ್ತು. ಆದರೆ ಇದರಿಂದ 2.5 ಎಕರೆಯಿಂದ 5 ಎಕರೆ ವರೆಗೆ ಭೂ ಹಿಡುವಳಿ ಹೊಂದಿದ್ದ 16.94 ಲಕ್ಷ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಲಾಭವಾಗಿತ್ತು.
ರೈತರ ಸಾಲ ಮನ್ನಾ ಮಾಡುವಾಗ ಐದು ಎಕರೆಗಿಂತ ಕಡಿಮೆ ಭೂಹಿಡುವಳಿ ಹೊಂದಿದ ರೈತರಿಗೆ ಮಾತ್ರವೇ ಅದರ ಲಾಭ ಸಿಗುವಂತೆ ಸರಕಾರ ವರ್ಗೀಕರಣ ಮಾಡಿರುವುದು ತಾರತಮ್ಯದ ಕೃತ್ಯವಾಗಿದೆ ಎಂದು ಜಸ್ಟಿಸ್ ಎಸ್ ನಾಗಮುತ್ತು ಮತ್ತು ಜಸ್ಟಿಸ್ ಎಂ ವಿ ಮುರಳೀಧರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.
2016ರ ಮಾರ್ಚ್ 31ರ ವರೆಗೆ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದಿದ್ದ ರಾಜ್ಯದ ಎಲ್ಲ ರೈತರಿಗೆ ಮದ್ರಾಸ್ ಹೈಕೋರ್ಟಿನ ಈ ಸಾಲಮನ್ನಾ ಆದೇಶ ಅನ್ವಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ