ಕರೀಂನಗರ : ಪತ್ನಿಯ ಶೀಲ ಶಂಕಿಸಿ ಇರಿದು ಕೊಂದ ಪತಿ
Team Udayavani, Feb 17, 2018, 12:34 PM IST
ಕರೀಂನಗರ : ಪತ್ನಿಯ ಶೀಲ ಶಂಕಿಸಿದ 38ರ ಹರೆಯದ ಪತಿ ಮಹಾಶಯನೋರ್ವ ಆಕೆಯನ್ನು ಕೊಂದ ಘಟನೆ ಕರೀಂ ನಗರ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೊಂಟಾಲಾ ಶೈಲಜಾ ಅಲಿಯಾಸ್ ಮಾಧವಿ (35) ಅವರಿಗೆ ಎಂಟು ವರ್ಷಗಳ ಹಿಂದೆ ಜಯಂತ್ ಕುಮಾರ್ ಜತೆಗೆ ಮದುವೆಯಾಗಿತ್ತು. ಈ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.
ಈಚೆಗೆ ಕೆಲ ತಿಂಗಳಿಂದ ಜಯಂತ್ ಕುಮಾರ್, ಪತ್ನಿಯ ಶೀಲವನ್ನು ಶಂಕಿಸಲು ಆರಂಭಿಸಿದ್ದ.
ನಿನ್ನೆ ಶುಕ್ರವಾರ ಜಯಂತ್ ಕುಮಾರ್ ಪೆಡ್ಡ ಪಾಪಯ್ಯ ಗ್ರಾಮದಲ್ಲಿನ ತನ್ನ ಹೊಲಕ್ಕೆ ಬಂದಿದ್ದಾಗ ಅಲ್ಲಿ ಕೆಲಸ ಮಾಡಲು ಪತ್ನಿ ಮಾಧವಿಯೂ ಬಂದಿದ್ದಳು. ಆ ಸಂದರ್ಭದಲ್ಲಿ ಜಯಂತ್ ಕುಮಾರ್ ಪತ್ನಿಯನ್ನು ಹರಿತವಾದ ಆಯುಧದಿಂದ ಇರಿದು ಕೊಂದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಈ ನಡುವೆ ಪಲಾಯನ ಮಾಡಿರುವ ಜಯಂತ್ ಕುಮಾರ್ ನನ್ನು ಹುಡುಕುತ್ತಿದ್ದಾರೆ.