Vande Bharth ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದಾತ ಸಿಗರೇಟ್ ಸೇದಿ ಸಿಕ್ಕಿಬಿದ್ದ
Team Udayavani, Aug 10, 2023, 4:29 PM IST
ಹೈದರಾಬಾದ್: ವಂದೇ ಭಾರತ್ ರೈಲು ಪ್ರಯಾಣ ಆರಂಭವಾದ ಬಳಿಕ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತದೆ ಅದರಂತೆ ಈ ಬಾರಿಯೂ ಸುದ್ದಿಯಲ್ಲಿದೆ ಅದು ಟಿಕೆಟ್ ಇಲ್ಲದೆ ಪ್ರಯಾಣಿಕನೊಬ್ಬ ರೈಲಿನಲ್ಲಿ ಪ್ರಯಾಣ ಮಾಡಿದ ಕಾರಣಕ್ಕೆ.
ರೈಲು ತಿರುಪತಿಯಿಂದ ಸಿಖಂದರಾಬಾದ್ಗೆ ಹೊರಟು ಗುಡೂರು ದಾಟುವಷ್ಟರಲ್ಲಿ ವ್ಯಕ್ತಿಯೊಬ್ಬ ರೈಲನ್ನು ಪ್ರವೇಶಿಸಿ ನೇರವಾಗಿ ಶೌಚಾಲಯದೊಳಗೆ ಹೋಗಿ ಕೂತಿದ್ದಾನೆ. ಆದರೆ ಆತ ಅಲ್ಲಿ ಸುಮ್ಮನೆ ಕುಳಿತಿದ್ದರೆ ಬಹುಶ ಪಾರಾಗುತ್ತಿದ್ದನೋ ಏನೋ ಆದರೆ ಅವನು ಅಲ್ಲಿ ಮಾಡಿದ ಒಂದು ತಪ್ಪಿನಿಂದ ರೇಲ್ವೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಅಂದಹಾಗೆ ಶೌಚಾಲಯದೊಳಗೆ ಹೋದ ವ್ಯಕ್ತಿ ಸಿಗರೇಟ್ ಸೇದಿದ್ದಾನೆ ಅದರ ಹೋಗೆ ಶೌಚಾಲಯದೊಳಗೆ ಹರಡುತ್ತಿದ್ದಂತೆ ರೈಲಿನಲ್ಲಿ ಅಳವಡಿಸಲಾದ ಫೈರ್ ಅಲಾರಂ ಮೊಳಗಳು ಆರಂಭಿಸಿದೆ ಇದರಿಂದ ಗಲಿಬಿಲಿಗೊಂಡ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈಲು ಮನುಬುಲು ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೆ ಪೊಲೀಸರು ರೈಲನ್ನು ತಪಾಸಣೆ ನಡೆಸಿದ್ದಾರೆ ಬಳಿಕ ಅಲಾರಾಂ ಮೊಳಗಿದ ಬೋಗಿಯನ್ನು ಪರಿಶೀಲಿಸಿದಾಗ ಶೌಚಾಲಯದೊಳಗೆ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲಾರಾಂ ಮೊಳಗಿರುವುದು ಗೊತ್ತಾಗಿದೆ ಬಳಿಕ ಶೌಚಾಲಯ ಪರಿಶೀಲಿಸಲು ಹೋದಾಗ ವ್ಯಕ್ತಿ ಒಳಗಿನಿಂದ ಲಾಕ್ ಮಾಡಿ ಅವಿತಿರುವುದು ಗೊತ್ತಾಗಿದೆ ಬಳಿಕ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ವ್ಯಕ್ತಿಯ ಬಳಿ ಟಿಕೆಟ್ ಕೂಡ ಇರಲಿಲ್ಲ. ಅಲ್ಲದೆ ವಿಚಾರಣೆ ನಡೆಸಿದ ವೇಳೆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Thekkatte: ಹೊಸಮಠ- ಬುಟ್ಟಿ ಹೆಣೆಯುವ ಕುಟುಂಬಗಳಿಗೆ ಬೇಕಿದೆ ಆಸರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ