ಬಾಪುವನ್ನು ರಕ್ಷಿಸಿದ್ದ ವ್ಯಕ್ತಿ ನಿಧನ
Team Udayavani, Jul 21, 2017, 5:15 AM IST
ಹೊಸದಿಲ್ಲಿ: ಇವರ ಹೆಸರು ಭಿಕು ದಾಜಿ ಭಿಲಾರೆ. ವಯಸ್ಸು 98 ವರ್ಷ. ಇವರು ಬುಧವಾರ ಮಹಾರಾಷ್ಟ್ರ ದಲ್ಲಿ ನಿಧನ ಹೊಂದಿದರು. ಭಿಕು ಅವರ ಸಾವು ಮುಖ್ಯವೆನಿಸಲು ಕಾರಣ- ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಭಿಕು ಅವರಿಗಿರುವ ನಂಟು. ಒಂದು ವೇಳೆ ಅಂದು ಭಿಕು ದಾಜಿ ಅವರು ಇಲ್ಲದೇ ಹೋಗಿದ್ದರೆ, ಬಾಪು ನಾಲ್ಕು ವರ್ಷ ಮೊದಲೇ ನಮ್ಮಿಂದ ದೂರಾಗಿರುತ್ತಿದ್ದರು!
1948ರ ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯ ವರನ್ನು ಗುಂಡಿಕ್ಕಿ ಕೊಂದ ಎಂಬುದಷ್ಟೇ ನಮಗೆ ಗೊತ್ತು. ಆದರೆ ಈ ಘಟನೆಗೂ ವರ್ಷಗಳ ಹಿಂದೆ ಇದೇ ಗೋಡ್ಸೆ, ಬಾಪುವನ್ನು ಕೊಲ್ಲಲು ಯತ್ನಿಸಿದ್ದ ಎಂಬುದು, ಈ ವೇಳೆ ಭಿಕು ಅವರು ಗೋಡ್ಸೆಯನ್ನು ತಡೆದು ಗಾಂಧೀಜಿಯ ಜೀವ ಉಳಿಸಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
“ಕ್ವಿಟ್ ಇಂಡಿಯಾ ಚಳವಳಿ ವೇಳೆ ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಮಹಾತ್ಮಾ ಗಾಂಧಿ, ಪುಣೆಯಲ್ಲಿನ ಅಗಾ ಖಾನ್ ಅರಮನೆಯ ಜೈಲಿನಿಂದ ಬಿಡುಗಡೆಯಾದ ಅನಂತರ 1944ರ ಜುಲೈ ತಿಂಗಳಲ್ಲಿ ಪಂಚಗಾನಿಗೆ ಭೇಟಿ ನೀಡಿ, ಅಲ್ಲೇ ತಂಗಿದ್ದರು. ಅಂದು ಸಂಜೆ ಶಾಲೆಯೊಂದರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸಭೆ ನಡೆಯಲಿತ್ತು. ಈ ವೇಳೆ ಚೂರಿ ಹಿಡಿದುಕೊಂಡು ತನ್ನ ಸಹಚರರೊಂದಿಗೆ ಗಾಂಧೀಜಿಯತ್ತ ನುಗ್ಗುತ್ತಿದ್ದ ಗೋಡ್ಸೆ ಯನ್ನು 25 ವರ್ಷದ ಯುವಕ ಭಿಕು ತಡೆದಿದ್ದರು. ಜತೆಗೆ ಬಾಪುವನ್ನು ಕೊಲ್ಲುವ ಗೋಡ್ಸೆ ಮತ್ತವನ ಸಹಚರರ ಸಂಚನ್ನು ವಿಫಲಗೊಳಿಸಿದ್ದರು. ಹೀಗೆ ಬಾಪುವನ್ನು ರಕ್ಷಿಸಿದ್ದ ಭಿಕು ಬುಧವಾರ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಕಷ್ಟು ಜನಪ್ರತಿನಿಧಿಗಳು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ