ಮಮತಾ ಬ್ಯಾನರ್ಜಿ ಸಚಿವರ ಶಿರಚ್ಛೇದನ ಬೆದರಿಕೆ: ಮಾವೋ ಪೋಸ್ಟರ್
Team Udayavani, Nov 15, 2018, 3:21 PM IST
ಕೋಲ್ಕತ: ಪಶ್ಚಿಮ ಬಂಗಾಲದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮಾವೋ ಉಗ್ರರೊಂದಿಗೆ ನಂಟು ಹೊಂದಿದ ನಾಲ್ವರನ್ನು ಬಂಧಿಸಿದ ಕೇವಲ 24 ತಾಸುಗಳ ತರುವಾಯ ಇಂದು ಗುರುವಾರ ಬೆಳಗ್ಗೆ ಮರುಕತ ಅರಣ್ಯದಲ್ಲಿ ಹಲವಾರು ನಕ್ಸಲ್ ಪೋಸ್ಟರ್ಗಳು ಬಿದ್ದುಕೊಂಡಿರುವುದು ಪತ್ತೆಯಾಗಿದೆ.
ಗುರುYರಿಪಾಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಮುರುಕತ ಅರಣ್ಯಕ್ಕೆ ಸಮೀಪದದ ರಸ್ತೆಯಲ್ಲಿ ಈ ಪೋಸ್ಟರ್ಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿದ್ದವು.
ಈ ಪೋಸ್ಟರ್ಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಕಾರದಲ್ಲಿ ಸಾರಿಗೆ ಸಚಿವರಾಗಿರುವ ಸುವೇಂದು ಅಧಿಕಾರಿ ಮತ್ತು ಸಾಲಬೋನಿ ಶಾಸಕ ಶ್ರೀಕಾಂತ್ ಮಹಾತೋ ಅವರಿಗೆ ಎಚ್ಚರಿಕೆ ನೀಡಲಾಗಿದೆ. “ಇವರ ತಲೆ ಕಡಿದು ನಮಗೆ ತಂದು ಕೊಡಿ. ಇವರು ಜಂಗಲ್ವುಹಲ್ ಜನರಿಗೆ ಕೇಜಿಗೆ 2 ರೂ. ಅಕ್ಕಿ ಕೊಡುವುದಾಗಿ ಹೇಳಿ ಮೂರ್ಖನ್ನಾಗಿ ಮಾಡುತ್ತಿದ್ದಾರೆ’ ಎಂದು ಈ ಪೋಸ್ಟರ್ಗಳಲ್ಲಿ ಬರೆಯಲಾಗಿದೆ.
“ಇದು ನಕ್ಸಲರ ಎಚ್ಚರಿಕೆ’ ಎಂಬ ಬರಹ ಇದ್ದು ಪೋಸ್ಟ್ರ್ನ ಕೆಳಭಾಗಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಎಂದು ಬರೆಯಲಾಗಿದೆ.
ಈ ಪೋಸ್ಟರ್ಗಳು ನಿಜವಾಗಿಯೂ ಮಾವೋವಾದಿಗಳಿಗೆ ಸಂಬಂಧಿಸಿದೆಯೇ ಅಥವಾ ಯಾವುದೋ ದುಷ್ಕರ್ಮಿಗಳ ಕೃತ್ಯ ಇದಾಗಿರಬಹುದೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಗೋಲ್ತೋರೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಸವ್ಯಸಾಚಿ ಗೋಸ್ವಾಮಿ, ಸಂಜೀವ ಮಜುಮ್ದಾರ್, ಅರ್ಕಾದೀಪ್ ಗೋಸ್ವಾಮಿ ಮತ್ತು ಟಿಪ್ಪು ಸುಲ್ತಾನ್ ಎಂಬ ಮಾವೋ ಉಗ್ರರೊಂದಿಗೆ ನಂಟು ಹೊಂದಿರುವರೆನ್ನಲಾದ ನಾಲ್ವರನ್ನು ಬಂಧಿಸಲಾದ ತರುವಾಯ ಈ ಪೋಸ್ಟರ್ ಗಳು ಕಂಡು ಬಂದಿವೆ. ಸುಮಾರು 46 ಪೋಸ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು