ಅಹ್ಮದಾಬಾದ್ನಲ್ಲಿ ತುರ್ತಾಗಿ ಇಳಿದ ಮುಂಬಯಿ-ದಿಲ್ಲಿ ವಿಮಾನ
Team Udayavani, Oct 30, 2017, 11:37 AM IST
ಹೊಸದಿಲ್ಲಿ : ಇಂದು ಸೋಮವಾರ ಮುಂಬಯಿಯಿಂದ ದಿಲ್ಲಿಗೆ ಹೊರಟಿದ್ದ ಜೆಟ್ ಏರ್ ವೇಸ್ ವಿಮಾನವನ್ನು, ಟೇಕಾಫ್ ಆದ ಸ್ವಲ್ಪವೇ ಹೊತ್ತಿನಲ್ಲಿ “ಭದ್ರತಾ ಕಾರಣ’ಗಳಿಗಾಗಿ ಅಹ್ಮದಾಬಾದ್ಗೆ ತಿರುಗಿಸಲಾಯಿತು.
ಮುಂಬಯಿಯಿಂದ ಇಂದು ಸೋಮವಾರ ನಸುಕಿನ 2.55ರ ಹೊತ್ತಿಗೆ ಟೇಕಾಫ್ ಆದ ಬಳಿಕ ಮಾರ್ಗ ಬದಲಾಯಿಸಲ್ಪಟ್ಟ ಜೆಟ್ ಏಸ್ ವೇಸ್ ವಿಮಾನ ನಸುಕಿನ 3.45ರ ಹೊತ್ತಿಗೆ ಅಹ್ಮದಾಬಾದ್ನಲ್ಲಿ ಇಳಿಯಿತು.
ವಿಮಾನದಿಂದ ಇಳಿಸಲ್ಪಟ್ಟ ಎಲ್ಲ ಪ್ರಯಾಣಿಕರನ್ನು ಕೂಲಂಕಷ ತಪಾಸಣೆಗೆ ಗುರಿಪಡಿಸಲಾಯಿತು. ಭದ್ರತಾ ಕಾರಣಗಳಿಂದಾಗಿ ವಿಮಾನವನ್ನು ಅಹ್ಮದಾಬಾದ್ಗೆ ತಿರುಗಿಸಲಾಯಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಓರ್ವರು ಹೇಳಿದ್ದಾರೆ.
ವಿಮಾನಕ್ಕೆ ಬೆದರಿಕೆ ಇದೆ ಎಂಬ ಕರೆಯನ್ನು ಅನುಸರಿಸಿ ವಿಮಾನವನ್ನು ಅಹ್ಮದಾಬಾದ್ಗೆ ತಿರುಗಿಸಿ ಇಳಿಸಲಾಯಿತು ಎಂದು ಭದ್ರತಾ ಸಿಬಂದಿ ತಿಳಿಸಿದ್ದಾರೆ.
ವಿಮಾನದಲ್ಲಿ ಒಟ್ಟು ಎಷ್ಟು ಪ್ರಯಾಣಿಕರು ಇದ್ದರು ಎಂಬುದು ತತ್ಕ್ಷಣಕ್ಕೆ ಗೊತ್ತಾಗಿಲ್ಲ. ಜೆಟ್ ಏರ್ ವೇಸ್ ವಕ್ತಾರನಿಂದ ಕೂಡ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು