ಮೀಸೆ ತೆಗದು ಗಡ್ಡ ಬಿಡುವವರು ಉಗ್ರರು : ಶಿಯಾ ಬೋರ್ಡ್ ಅಧ್ಯಕ್ಷ
Team Udayavani, Jul 8, 2018, 3:42 PM IST
ಹೊಸದಿಲ್ಲಿ: ಗಡ್ಡ ಬಿಡುವುದು ಇಸ್ಲಾಂನ ಸಂಪ್ರದಾಯ. ಆದರೆ ಯಾರು ಮೀಸೆಯನ್ನು ಬೋಳಿಸಿ ಗಡ್ಡ ಬಿಡುತ್ತಾರೊ ಅವರು ಉಗ್ರರು , ಉಗ್ರರ ಮುಖವಾಗಿ ದೇಶ ಮತ್ತು ವಿಶ್ವದಲ್ಲಿ ಪ್ರತಿಬಿಂಬಿತವಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸೀಂ ರಾಝ್ವಿ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.
ರಾಝ್ವಿ ಅವರ ಹೇಳಿಕೆಯ ವಿಡಿಯೋವು ಬಿಡುಗಡೆಗೊಂಡಿದ್ದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಹಲವು ಮುಸ್ಲಿಮರು ವ್ಯಾಪಕ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರಾಝ್ವಿ ಅವರು ಮೌಲ್ವಿಗಳು ಹೊರಡಿಸುವ ಫತ್ವಾಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದು , ಸರ್ಕಾರ ಜನರಲ್ಲಿ ದ್ವೇಷ ಹುಟ್ಟಿಸುವ ಇಂತಹ ಆದೇಶಗಳ ಕುರಿತು ರಾಜದ್ರೋಹ ನಡೆಸಿದ ಪ್ರಕರಣ ಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೇರಳದಲ್ಲಿ ಬಿಂದಿ ಇಟ್ಟ ಕಾರಣಕ್ಕೆ ಮದರಸಾದಿಂದ ವಿದ್ಯಾರ್ಥಿನಿಯನ್ನು ಸಂಸ್ಪೆಂಡ್ ಮಾಡಿದ ಕ್ರಮವನ್ನು ಖಂಡಿಸಿರುವ ರಾಝ್ವಿ ಈ ದೇಶದಲ್ಲಿ ಮಹಿಳೆ ಬಿಂದಿಯಾಗಲಿ ಕುಂಕುಮವಾಗಲಿ ಹಣೆಗೆ ಇಡಬಹುದು, ಅಂತಹ ಪವಿತ್ರ ಆಚರಣೆಗಳು ಹರಾಮ್ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಝ್ವಿ ಅವರಿಗೆ ಈಗಾಗಲೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿದ್ದು ಉತ್ತರಪ್ರದೇಶ ಸರಕಾರ ಅವರಿಗೆ ವೈ ಕೆಟಗರಿಯ ಭದ್ರತೆ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ