ಹೈದರಾಬಾದ್ ಎನ್ ಕೌಂಟರ್: ನಿರ್ಭಯಾ ತಾಯಿ ಹೇಳಿದ್ದೇನು?
Team Udayavani, Dec 6, 2019, 9:03 AM IST
ಹೈದರಾಬಾದ್: ಇಲ್ಲಿನ 26 ವರ್ಷದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಾರೆ.
2012ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ತಲ್ಲಣ ಮೂಡಿಸಿದ್ದ ದೆಹಲಿಯ ನಿರ್ಭಯಾ ಪ್ರಕರಣದ ಸಂತ್ರಸ್ಥೆಯ ತಾಯಿ ಆಶಾ ದೇವಿ ಹೈದರಾಬಾದ್ ಎನ್ ಕೌಂಟರ್ ಬಗ್ಗೆ ಮಾತನಾಡಿದ್ದು, ನನ್ನ ನೋವಿಗೆ ಮುಲಾಮು ಹಚ್ಚಿದ ಹಾಗಾಗಿದೆ ಎಂದಿದ್ದಾರೆ.
ಆರೋಪಿಗಳ ಎನ್ ಕೌಂಟರ್ ನಿಂದಾಗಿ 2012ರಿಂದ ನಾನು ಅನುಭವಿಸುತ್ತಿರುವ ನೋವಿಗೆ ಸ್ವಲ್ಪ ಮಟ್ಟಿಗೆ ಮುಲಾಮು ಹಚ್ಚಿದ ಹಾಗಾಗಿದೆ. ಕನಿಷ್ಠ ಒಬ್ಬ ಮಗಳಿಗಾದಳೂ ನ್ಯಾಯ ದೊರೆಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂತ್ರಸ್ಥೆ ದಿಶಾಳ ಹೆತ್ತವರಿಗೆ ಇಂದು ಸ್ವಲ್ಪ ಸಮಾಧಾನವಾಗಬಹುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮಾಡುವವರಿಗೆ ಭಯ ಉಂಟಾಗಬಹುದು ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.