Ram Mandir; ಔಪಚಾರಿಕ ಆಹ್ವಾನವಿಲ್ಲ, ಜ 22 ರ ನಂತರ ಭೇಟಿ ನೀಡುತ್ತೇನೆ: ಕೇಜ್ರಿವಾಲ್
ಕುಟುಂಬ ಸಮೇತ ಭೇಟಿ ನೀಡುತ್ತೇವೆ..
Team Udayavani, Jan 17, 2024, 9:42 PM IST
ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತನಗೆ ಔಪಚಾರಿಕ ಆಹ್ವಾನ ಬಂದಿಲ್ಲ ಆದರೆ ಜನವರಿ 22 ರ ಕಾರ್ಯಕ್ರಮದ ನಂತರ ದೇವಾಲಯಕ್ಕೆ ಭೇಟಿ ನೀಡಲಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ”ನನಗೆ ಪತ್ರ ಕಳುಹಿಸಿದ್ದಾರೆ, ನನ್ನನ್ನು ಔಪಚಾರಿಕವಾಗಿ ಆಹ್ವಾನಿಸಲು ತಂಡ ಬರುತ್ತದೆ ಎಂದು ಹೇಳಿದ್ದರು, ಆದರೆ ಯಾರೂ ಬಂದಿಲ್ಲ, ಪರವಾಗಿಲ್ಲ, ಅವರು ಪತ್ರದಲ್ಲಿ ಬರೆದಿದ್ದಾರೆ. ಬಹಳಷ್ಟು ವಿಐಪಿಗಳು ಮತ್ತು ವಿವಿಐಪಿಗಳು ಈವೆಂಟ್ಗೆ ಬರುತ್ತಾರೆ ಮತ್ತು ಭದ್ರತಾ ಕಾರಣಗಳಿಗಾಗಿ ಒಬ್ಬ ವ್ಯಕ್ತಿಯನ್ನು ಮಾತ್ರ ಅನುಮತಿಸಲಾಗುವುದು ಎಂದು ಹೇಳಿದ್ದಾರೆ.ಜನವರಿ 22 ರ ಕಾರ್ಯಕ್ರಮದ ನಂತರ ಪತ್ನಿ, ಮಕ್ಕಳು ಮತ್ತು ಪೋಷಕರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ.ನನ್ನ ಹೆತ್ತವರು ಸಹ ಹೋಗಲು ತುಂಬಾ ಉತ್ಸುಕರಾಗಿದ್ದಾರೆ” ಎಂದು ಹೇಳಿದರು.