ರಾಷ್ಟ್ರ ಬಿಟ್ಟರೆ ಕಣ್ಮುಂದೆ ಬೇರೇನೂ ಇಲ್ಲ!


Team Udayavani, Oct 1, 2020, 6:08 AM IST

ರಾಷ್ಟ್ರ ಬಿಟ್ಟರೆ ಕಣ್ಮುಂದೆ ಬೇರೇನೂ ಇಲ್ಲ!

ಭಕ್ತಿ, ರಾಷ್ಟ್ರಭಕ್ತಿ, ಧರ್ಮರಕ್ಷಣೆ ನಮ್ಮಂಥ ಸ್ವಯಂ ಸೇವಕರ ಅವಿಭಾಜ್ಯ ಅಂಗ. ಈ ಮೂರು ಅಂಶಗಳು ನಮ್ಮ ಪೂರ್ವಜರಿಂದಲೇ ನಮಗೆ ಸಿದ್ಧಿಸಿದೆ. ಈ ರಾಷ್ಟ್ರ ಬಿಟ್ಟರೆ ನಮ್ಮ ಕಣ್ಮುಂದೆ ಬೇರೇನೂ ಇಲ್ಲ. ಇದು ಬಿಟ್ಟರೆ ನಾವು ಜೀವಿಸುವುದಕ್ಕೆ ಬೇರೆ ಅರ್ಥಗಳೇ ಉಳಿದಿಲ್ಲ.

ನನಗೆ ಈ ತೀರ್ಪು ಕೇಳಿ ಅಪಾರ ಖುಷಿ ಆಗ್ತಿದೆ. ಆಡ್ವಾಣಿಜೀ, ಮುರಳೀ ಜೀ ಅವರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ. ನಮಗಿಂತ ಹಿರಿಯ ಪೀಳಿಗೆ ಕೂಡ ಮಹತ್ವದ ಹೋರಾಟ ನಡೆಸಿತ್ತು. ಅವರ ಕಾಲದಲ್ಲಿ ಕೈಗೂಡದ ಕನಸು, ನಮ್ಮ ಮುಂದೆ ಈಗ ನನಸಾಗಿ ನಿಂತಿದೆ. ನಾವು ಅಂದು ಮಾಡಿದ ತ್ಯಾಗವನ್ನು ಫ‌ಲ ರೂಪದಲ್ಲಿ ಇಂದು ನೋಡುವುದಕ್ಕೆ ಸಿಕ್ಕಿದೆ. ಇಂದು ಹೋರಾಟಗಾರರ ಪರವಾಗಿ ತೀರ್ಪು ಬಂದಿದೆ. ಪ್ರಧಾನಿ ಮೋದಿ ಅವರ ಕಾಲದಲ್ಲಿಯೇ ಇವೆಲ್ಲವೂ ಕೈಗೂಡುತ್ತಿರುವುದು ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಮೋದಿ ನಮ್ಮೆಲ್ಲರ ಪಾಲಿಗೆ “ನ ಭೂತೋ ನ ಭವಿಷ್ಯತಿ’. ಇಂಥ ಮನುಷ್ಯ ಇಲ್ಲಿಯ ತನಕ ಭೂಮಿಯಲ್ಲಿ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದು ಬಹುಶಃ ಅಸಾಧ್ಯ. ಯಾವುದು ಅಸಾಧ್ಯವಾಗಿದ್ದವೋ ಅವುಗಳನ್ನೆಲ್ಲ ಸಾಧ್ಯವಾಗಿಸಿದ ಯುಗಪುರುಷ. ಯಾವುದೆಲ್ಲ ಕನಸಾಗಿದ್ದವೋ, ಅವೆಲ್ಲವನ್ನೂ ವಾಸ್ತವವಾಗಿಸಿದ ನಾಯಕ. ಇನ್ನೂ ಅವರ ಮುಂದೆ ಮಾಡಬೇಕಾದ ಕೆಲಸಗಳು ಬಹಳ ಇವೆ. ನಮ್ಮ ಮುಂದಿನ ಪೀಳಿಗೆ ಕೂಡ ಹಲವು ಸಿಹಿಸಂದರ್ಭಗಳನ್ನು ಎದುರು ನೋಡಲಿದೆ.

ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದ ನಾಯಕತ್ವದ ನಿಲುವುಗಳನ್ನು ಎದುರು ನೋಡುತ್ತಿವೆ. ಒಟ್ಟಿನಲ್ಲಿ ಮರ್ಯಾದಾ ಪುರುಷೋತ್ತಮನಿಗೆ ಹಿಂದೂ ರಾಷ್ಟ್ರದಲ್ಲಿ ಒಂದು ನೆಲೆ ಸಿಗಲು ಇದ್ದ ಅಡೆತಡೆಗಳೆಲ್ಲ ಒಂದೊಂದಾಗಿ ದೂರವಾಗುತ್ತಿವೆ.

ಮಂಜುನಾಥ ಶೆಣೈ, ಪ್ರತ್ಯಕ್ಷದರ್ಶಿ

ಪ್ರತ್ಯಕ್ಷದರ್ಶಿಯೊಬ್ಬರ ನೆನಪಿನಾಳದಿಂದ…
1992ರ ಡಿಸೆಂಬರ್‌ 6. ದೇಶದ ಇತಿಹಾಸದಲ್ಲಿ ಪ್ರಮುಖ ಘಟನೆ. ಅಯೋಧ್ಯೆ ಯಲ್ಲಿರುವ ವಿವಾದಿತ ಕಟ್ಟಡ ಧ್ವಂಸವಾಗುವ ಹಿಂದಿನ ದಿನ ಅಂದರೆ, 1992ರ ಡಿ.5ರಂದು ನಾನು ಅಯೋಧ್ಯೆ ತಲುಪಿದೆ. ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ ಆಗಮಿಸುತ್ತಿದ್ದರು. ವಿವಾದಿತ ಕಟ್ಟಡದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಅಲ್ಲಿನ ಭದ್ರತೆಯನ್ನು ಮೀರಿ ಒಳ ಪ್ರವೇಶಿಸಲು ಅವಕಾಶ ಕೊಡಬೇಕು ಎಂದು ಅಲ್ಲಿಗೆ ಬಂದಿದ್ದವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಹನುಮಾನ್‌ ಗಡಿ ದೇಗುಲದ ಮುಖ್ಯ ಅರ್ಚಕ ಜ್ಞಾನ ದಾಸ್‌ ಕರಸೇವಕರತ್ತ ಧಾವಿಸಿ ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡಿದರು.

ಇದೇ ಸಂದರ್ಭದಲ್ಲಿ ನೂಕು ನುಗ್ಗಲು ಹೆಚ್ಚಾಯಿತು. ಧ್ವನಿವರ್ಧಕದಲ್ಲಿ ಕರಸೇವಕರಿಗೆ ಹೊಡೆಯಬೇಡಿ ಎಂದು ಮನವಿ ಮಾಡಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಹಠಾತ್ತನೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದವರು ಬಾಬರಿ ಮಸೀದಿ ಕಟ್ಟಡದತ್ತ ನುಗ್ಗಲಾರಂಭಿಸಿದರು. ಘಟನೆಯ ಬಗ್ಗೆ ವರದಿ ಮಾಡುವ ನಿಟ್ಟಿನಲ್ಲಿ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳೂ, ಛಾಯಾಗ್ರಾಹಕರೂ ಅಚ್ಚರಿಯಿಂದಲೇ ನೋಡುವಂತಾಯಿತು. ನೂರಾರು ಮಂದಿ ವಿವಾದಿತ ಕಟ್ಟಡದ 3 ಡೂಮ್‌ಗಳನ್ನು ಏರಿಬಿಟ್ಟಿದ್ದರು. ಆಗ ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸೂಚನೆ ಬಂತು. “ಕಟ್ಟಡದ ಮೇಲೆ ಏರಿದವರೆಲ್ಲ ಕೆಳಗೆ ಇಳಿಯಲೇಬೇಕು. ಏಕೆಂದರೆ ಅದು ಕೂಡಲೇ ಕುಸಿಯಲಿದೆ’ ಎಂದು ಸೂಚಿಸಲಾಗಿತ್ತು. ಅದನ್ನೇ ಪ್ರಾಂತೀಯ ಭಾಷೆಗಳಲ್ಲಿ ವಿವರಿಸಲಾಯಿತಾದರೂ ಫ‌ಲ ನೀಡಲಿಲ್ಲ. ರಾಜಕೀಯ ನಾಯಕರೂ ಉದ್ರಿಕ್ತರ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಪ್ರಕಾಶ್‌ ಗುಪ್ತಾ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.