ಅಮರನಾಥ ಯಾತ್ರೆ: 4 ಕಡೆಗಳಲ್ಲಿ ಸ್ಥಳದಲ್ಲೇ ನೋಂದಾವಣೆ
Team Udayavani, Apr 25, 2018, 5:05 PM IST
ಜಮ್ಮು : ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಅಮರನಾಥ ಪುಣ್ಯಕ್ಷೇತ್ರದ 60 ದಿನಗಳ ಯಾತ್ರೆ ಈ ವರ್ಷ ಜೂನ್ 28ರಂದು ಆರಂಭವಾಗಲಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳದಲ್ಲೇ ನೋಂದಾವಣೆ ಮಾಡುವ ನಾಲ್ಕು ತಾಣಗಳನ್ನು ಈ ಬಾರಿ ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಾತ್ರೆ ಅವಧಿಯಲ್ಲಿ ಯಾತ್ರಿಕರಿಗೆ ಸ್ಥಳದಲ್ಲೇ ನೋಂದಾವಣೆ ಮಾಡಿಕೊಳ್ಳುವ ಸೌಕರ್ಯವನ್ನು ಜಮ್ಮುವಿನ ನಾಲ್ಕು ಕಡೆಗಳಲ್ಲಿ ತೆರೆಯಲಾಗುವುದು ಎಂದು ಅಮರನಾಥ್ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಂಗ್ ನರೂಲಾ ಇಂದಿಲ್ಲಿ ತಿಳಿಸಿದರು.
ವೈಷ್ಣವೀ ಧಾಮ, ಸರಸ್ವತೀ ಧಾಮ, ಜಮ್ಮು ಹಾತ್, ಗೀತಾ ಭವನ – ರಾಮ ಮಂದಿರ – ಈ ನಾಲ್ಕು ಸ್ಥಳಗಳಲ್ಲಿ ಯಾತ್ರಿಕರಿಗೆ ಸ್ಥಳದಲ್ಲೇ ನೋಂದಾವಣೆ ಸೌಕರ್ಯ ಇರುತ್ತದೆ ಎಂದವರು ಹೇಳಿದರು.