ಟ್ಯಾಂಕ್ಗಳಲ್ಲಿ ದೋಷ: ರೇಸ್ನಿಂದ ಭಾರತ ಹೊರಕ್ಕೆ
Team Udayavani, Aug 13, 2017, 7:30 AM IST
ಹೊಸದಿಲ್ಲಿ: ರಷ್ಯಾದ ಅಲಬಿನೊ ಪ್ರದೇಶದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ರೇಸ್ನಿಂದ ಭಾರತೀಯ ಸೇನೆ ಹೊರಬಿದ್ದಿದೆ. ರೇಸ್ನ ಸಂದರ್ಭದಲ್ಲಿ ಭಾರತ ಸೇನೆಯ ಪ್ರಮುಖ ಮತ್ತು ಮೀಸಲು ಟಿ-90 ಯುದ್ಧ ಟ್ಯಾಂಕರ್ಗಳೆರಡರಲ್ಲೂ ತಾಂತ್ರಿಕ ಸಮಸ್ಯೆ ತಲೆದೋರಿದ ಕಾರಣ ಭಾರತ ಅಂತಿಮ ಸುತ್ತಿನ ಸ್ಪರ್ಧೆಗೆ ಹೋಗಲು ಅನರ್ಹವಾಯಿತು.
ಇದಕ್ಕೂ ಮೊದಲ 2 ಸುತ್ತಿನ ಸ್ಪರ್ಧೆಗಳಲ್ಲಿ ಭಾರತ ಮೊದಲ ಸ್ಥಾನಗಳನ್ನು ಕಾಯ್ದುಕೊಂಡಿತ್ತು. ಆದರೆ ನಂತರ ಸುತ್ತಿನಲ್ಲಿ ಟ್ಯಾಂಕರ್ಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಕಾರಣದಿಂದ ಭಾರತ ಅಂತಿಮ ಸ್ಪರ್ಧೆಯಿಂದಲೇ ದೂರ ಉಳಿಯುವಂತೆ ಮಾಡಿದ್ದು ದುರದೃಷ್ಟಕರ ಎಂದು ಅಧಿಕಾರಿಗಳು ಹೇಳಿದ್ದಾರೆ. ರಷ್ಯಾ, ಬೆಲಾರಸ್, ಕಜಕಿಸ್ಥಾನ ಮತ್ತು ಚೀನ ಸ್ಪರ್ಧೆಯ ಅಂತಿಮ ಸುತ್ತನ್ನು ಪ್ರವೇಶಿಸಿವೆ. ಭಾರತ ಸ್ಥಳೀಯವಾಗಿ ನಿರ್ಮಿಸಿದ ಅರ್ಜುನ್ ಟ್ಯಾಂಕರ್ಗಳನ್ನು ಈ ಬಾರಿ ಸ್ಪರ್ಧೆಗೆ ಇಳಿಸುವ ನಿರೀಕ್ಷೆಗಳಿದ್ದವು. ಅದರೆ ಸೇನೆ ರಷ್ಯಾ ನಿರ್ಮಿತ ಟಿ-90 ಪ್ರಮುಖ ಯುದ್ಧ ಟ್ಯಾಂಕರ್ ಅನ್ನು ಸ್ಪರ್ಧೆಗೆ ಇಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ