CBFC ಗೆ ಬಿಗಿ ಭದ್ರತೆ; ಕರ್ಣಿ ಸೇನೆ ಪ್ರತಿಭಟನಕಾರರು ವಶಕ್ಕೆ
Team Udayavani, Jan 12, 2018, 11:37 AM IST
ಮುಂಬಯಿ : ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಪದ್ಮಾವತ್ (ಈ ಮೊದಲಿನ ಹೆಸರು ಪದ್ಮಾವತಿ) ಐತಿಹಾಸಿಕ ಕಥಾ ಚಿತ್ರಕ್ಕೆ ಸಿಬಿಎಫ್ಸಿ ಸರ್ಟಿಫಿಕೇಟ್ ನೀಡಿದ್ದು ಇದೇ ಜನವರಿ 21ರಂದು ಅದು ಬಿಡುಗಡೆಯಾಗಲಿರುವುದನ್ನು ಪ್ರತಿಭಟಿಸಿ ರಾಜಸ್ಥಾನದ ಕರ್ಣಿ ಸೇನೆ CBFC ಕಚೇರಿ ಮುಂದೆ ಜಮಾಯಿಸಿರುವುದನ್ನು ಲೆಕ್ಕಿಸಿ ಹೆಚ್ಚುವರಿ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ.
ಕೇಂದ್ರ ಸೆನ್ಸಾರ್ ಮಂಡಳಿಯ ಕಾರ್ಯಾಲಯದ ಮುಂದೆ ಜಮಾಯಿಸಿರುವ ಹಲವಾರು ಕರ್ಣಿ ಸೇನಾ ಪ್ರತಿಭಟನೆಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೇದಿ ಅವರು ಮೊನ್ನೆ ಗುರುವಾರವೇ ತಮ್ಮ ಕಾರ್ಯಕರ್ತರು ಸಿಬಿಎಫ್ಸಿ ಕಚೇರಿಯನ್ನು ಘೇರಾವ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಂದು ಸಾವಿರಾರು ಜನರು ಸಿಬಿಎಫ್ಸಿ ಕಚೇರಿ ಮುಂದಿನ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಸಿಬಿಎಫ್ಸಿಗೆ ಹೇಗೆ ಕೆಲಸ ಮಾಡಬೇಕೆಂದೇ ಗೊತ್ತಿಲ್ಲ ಎಂದು ಸುಖದೇವ್ ಅವರು “ಪದ್ಮಾವತ್’ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿ ಅದರ ಬಿಡುಗಡೆಯನ್ನು ಅನುಮತಿಸಿರುವ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!