ಭಾರತ ದಾಳಿಗೆ ಪಾಕ್ ಉಗ್ರರಿಗೆ ಸಮುಂದರೀ ಜಿಹಾದ್ ತರಬೇತಿ ?
Team Udayavani, Jan 2, 2019, 10:41 AM IST
ಹೊಸದಿಲ್ಲಿ : ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಮತ್ತು ನೆರೆಯ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಉಗ್ರ ಸಂಘಟನೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂಬ ಬಗ್ಗೆ ಪಾಕಿಸ್ಥಾನದ ಮೇಲೆ ಅತೀವವಾದ ಅಂತಾರಾಷ್ಟ್ರೀಯ ಒತ್ತಡ ಇದೆ. ಆದರೂ ಪಾಕ್ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಸಮುಂದರೀ ಜಿಹಾದ್ (ಜಲಾಂತರ್ಗತ ಭಯೋತ್ಪಾದಕ ದಾಳಿ) ನಡೆಸುವುದಕ್ಕೆ ತನ್ನ ಉಗ್ರರನ್ನು ತರಬೇತುಗೊಳಿಸುತ್ತಿವೆ ಎಂಬ ಆಘಾತಕಾರಿ ವಿಷಯ ಈಗ ಬಯಲಾಗಿದೆ.
ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್ ಆಹಿರ್ ಅವರು ಲೋಕಸಭೆಗಿಂದು ಈ ವಿಷಯ ತಿಳಿಸಿ, ಈ ಕಾರಣಕ್ಕೆ ದೇಶದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಲಿಖೀತ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಆಹಿರ್ ಅವರು, ಪಾಕ್ ಉಗ್ರರು 26/11ರ ಮುಂಬಯಿ ದಾಳಿ ರೀತಿಯ ಭಯೋತ್ಪಾದ ಕೃತ್ಯಗಳನ್ನು ಭಾರತೀಯ ಬಂದರುಗಳ ಮೇಲೆ, ಸರಕು ಸಾಗಣೆ ಹಡಗುಗಳ ಮೇಲೆಅಥವಾ ನಡು ಸಾಗರದಲ್ಲಿನ ತೈಲ ಟ್ಯಾಂಕರ್ಗಳ ಮೇಲೆ ನಡೆಸಬಹುದೆನ್ನುವ ಬಗ್ಗೆ ಯಾವುದೇ ನಿಖರ ಗುಪ್ತಚರ ಮಾಹಿತಿ ಈ ತನಕ ಸಿಕ್ಕಿಲ್ಲ; ಆದರೂ ಇಂತಹ ಒಂದು ಸಂಭಾವ್ಯತೆಯನ್ನು ದೃಷ್ಟಿಯಲ್ಲಿರಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಈಗ ಉಪಲಬ್ಧವಿರುವ ಮಾಹಿತಿಗಳ ಪ್ರಕಾರ ಪಾಕ್ ಉಗ್ರ ಸಂಘಟನೆಗಳು ತಮ್ಮ ಉಗ್ರರನ್ನು ಭಾರತದೊಳಗೆ ಭಯೋತ್ಪಾದಕ ಕೃತ್ಯಗಳಿಗಾಗಿ ಸಮುದ್ರದ ಮೂಲಕ ನುಸುಳಿಸುವ ಯೋಜನೆ ಹೊಂದಿದ್ದು ಅದಕ್ಕಾಗಿ ಸಮುಂದರೀ ಜಿಹಾದ್ ಪಡೆಗಳಿಗೆ ತರಬೇತಿ ನೀಡುತ್ತಿವೆ ಎಂದು ತಿಳಿದು ಬಂದಿದೆ ಎಂದು ಸಚಿವ ಆಹಿರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ