ಮಧುರೆ: ಅಧಿಕ ತೀವ್ರತೆಯ 2 ಪೈಪ್ ಬಾಂಬ್ ವಶ; ಮೂವರ ಬಂಧನ
Team Udayavani, Jan 27, 2017, 3:19 PM IST
ಮಧುರೆ : ಇಲ್ಲಿನ ಟೈಲರಿಂಗ್ ಶಾಪ್ ಒಂದರಿಂದ ಪೊಲೀಸರು ಅಧಿಕ ತೀವ್ರತೆಯ ಎರಡು ಪೈಪ್ ಬಾಂಬ್ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ನಿನ್ನೆಯೇ ಅಬ್ದುಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂಬ ಇಬ್ಬರನ್ನು ಬಂಧಿಸಿದ್ದು ಇಂದು ಬೆಳಗ್ಗೆ ಮೂರನೇ ಆರೋಪಿಯಾಗಿರುವ ಖಾದರ್ ಎಂಬಾತನನ್ನು ಮಧುರೆ ಮೆಡಿಕಲ್ ಕಾಲೇಜಿಗೆ ಸಮೀಪ ಬಂಧಿಸಿದರು.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಪ್ರಕಾರ ಮುಸ್ಲಿಂ ಮುನ್ನಾನಿ ಪಸಾರೈ ಎಂಬ ಸಂಘಟನೆ ಅಧ್ಯಕ್ಷ ಮೊಹಮ್ಮದ್ ಉಸಾಮಾ ಎಂಬಾತನು ಈ ಬಾಂಬ್ಗಳನ್ನು ತಯಾರಿಸಿದ್ದಾನೆ. ಹಿಂದು ಮುನ್ನಾನಿ ನಾಯಕ ರಾಮ ಗೋಪಾಲನ್ ಎಂಬವರನ್ನು ಹತ್ಯೆ ಗೈಯುವ ಉದ್ದೇಶದಿಂದ ಈ ಬಾಂಬ್ಗಳನ್ನು ಇಲ್ಲಿಗೆ ತರಲಾಗಿತ್ತು.
ರಾಮಗೋಪಾಲನ್ ಅವರನ್ನು ಕೊಲ್ಲುವ ಸಂಚನ್ನು ಎರಡು ತಿಂಗಳ ಹಿಂದೆಯೇ ಬಾಷಾ ಎಂಬಾತನ ಜತೆಗಿನ ಮಾತುಕತೆಯ ಬಳಿಕ ರೂಪಿಸಲಾಗಿತ್ತು. ಈ ಸಂಚನ್ನು ಈಗ ಕೊಯಮುತ್ತೂರಿನ ಪಲ್ಲಡಂ ಎಂಬಲ್ಲಿ ನಡೆಯುತ್ತಿರುವ 9ನೇ ಹಿಂದು ಹಕ್ಕುಗಳನ್ನು ಮರಳಿ ಪಡೆಯುವ ಸಮಾವೇಶದಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು ಎಂದು ಅಬ್ದುಲ್ಲಾ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
“ಜಲ್ಲಿಕಟ್ಟು ಆಂದೋಲನದ ಪ್ರಯುಕ್ತವಾಗಿ ವಿವಿಧ ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಯುತ್ತಿದ್ದುದರಿಂದ ಪೈಪ್ ಬಾಂಬ್ಗಳನ್ನು ನಮಗೆ ಮಧುರೆಯಿಂದ ಪಲ್ಲಡಂ ಗೆ ಸಾಗಿಸಲು ಸಾಧ್ಯವಾಗಲಿಲ್ಲ; ಹಾಗಾಗಿ ಅವು ಪೂದೂರಿನ ಅಬ್ದುಲ್ ರೆಹಮಾನ್ ಬಳಿಯೇ ಉಳಿದವು’ ಎಂದಾತ ಪೊಲೀಸರಲ್ಲಿ ಹೇಳಿದ್ದಾನೆ. ಅಬ್ದುಲ್ಲ ಜಲ್ಲಿಕಟ್ಟು ಪರ ಆಂದೋಲನದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಅಬ್ದುಲ್ಲ ಪೂದೂರು ಮತ್ತು ತಮುಕ್ಕ, ನಡುವೆ ಚೀಲವೊಂದನ್ನು ಹಿಡಿದುಕೊಂಡು ಶಂಕಾಸ್ಪದವಾಗಿ ನಡೆದಾಡುತ್ತಿದ್ದಾಗ ಆತ ನಿನ್ನೆ ಗುರುವಾರ ಪೊಲೀಸರ ಕೈಗೆ ಸಿಕ್ಕಿಬಿದ್ದ; ಅನಂತರ ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ಸಂಚಿನ ಬಗ್ಗೆ ಬಾಯಿಬಿಟ್ಟ. ಈತ ಕೊಟ್ಟ ಮಾಹಿತಿಯ ಪ್ರಕಾರ ಖಾದರ್ನನ್ನು ಪೊಲೀಸರು ಬಂಧಿಸಿದರು.
ಅಬ್ದುಲ್ ರೆಹಮಾನ್ ಮಾಲಕತ್ವದ ಪೂದೂರಿನಲ್ಲಿನ ಟೈಲರಿಂಗ್ ಅಂಗಡಿಯಿಂದ ಅಧಿಕ ತೀವ್ರತೆಯ ಪೈಪ್ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್