ಪಿಎನ್ಬಿ ಹಗರಣ ಫಲಶ್ರುತಿ: LoU, LoC ಮೇಲೆ RBI ನಿಷೇಧ
Team Udayavani, Mar 14, 2018, 11:14 AM IST
ಮುಂಬಯಿ : ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ, ಆಮದು ಹಣಕಾಸು ಸೌಲಭ್ಯ ಮಾರ್ಗದ ಮೂಲಕ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 12,600 ಕೋಟಿ ರೂ.ಗಳನ್ನು ವಂಚಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಆ ಮಾರ್ಗವನ್ನು ಮುಚ್ಚುವ ಕ್ರಮವಾಗಿ ಬ್ಯಾಂಕುಗಳು ಲೆಟರ್ ಆಫ್ ಅಂಡರ್ಟೇಕಿಂಗ್ (ಎಲ್ಓಯು) ರೂಪದಲ್ಲಿ ಭದ್ರತೆ ನೀಡುವುದನ್ನು ನಿಷೇಧಿಸಿದೆ.
ಆಮದು ಉದ್ಯಮಿಗಳು ತಮ್ಮ ಸಾಗರೋತ್ತರ ಖರೀದಿಗಳಿಗೆ ಹಣ ಒದಗಿಸಲು ಬಳಸುವ ಲೆಟರ್ ಆಫ್ ಕಂಫರ್ಟ್ ಸೌಕರ್ಯವನ್ನು ಕೂಡ ಆರ್ಬಿಐ ತತ್ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.
ಆದರೆ ಲೆಟರ್ ಆಫ್ ಕ್ರೆಡಿಟ್ ಮತ್ತು ಬ್ಯಾಂಕ್ ಗ್ಯಾರಂಟಿಗಳು ಈ ಹಿಂದಿನಂತೆಯೇ ಮುಂದುವರಿಯಲಿವೆ; ಆದರೆ ಕೆಲವು ಶರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಆರ್ಬಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕಿನ ಬ್ರ್ಯಾಡಿ ಹೌಸ್ ಶಾಖೆಯ ನೌಕರರೊಂದಿಗೆ ಶಾಮೀಲಾಗಿ ಯಾವುದೇ ಮಾರ್ಜಿನ್ ಹಣವನ್ನು ಕೂಡ ಭದ್ರತೆಗಾಗಿ ಒದಗಿಸಿದೇ, ಅಕ್ರಮ ಲೆಟರ್ ಆಫ್ ಅಂಡರ್ ಟೇಕಿಂಗ್ಗಳನ್ನು ಪಡೆದುಕೊಂಡು ಬ್ಯಾಂಕಿಗೆ ಸಾವಿರಗಟ್ಟಲೆ ಕೋಟಿ ರೂ.ಗಳನ್ನು ವಂಚಿಸಿದ್ದರು.
ಮೋದಿ ಮತ್ತು ಚೋಕ್ಸಿ ಅವರಿಗೆ ಯಾವುದೇ ಪೂರ್ವಾನುಮತಿಯ ಕ್ರೆಡಿಟ್ ಲಿಮಿಟ್ ಕೂಡ ಇರಲಿಲ್ಲ ಎಂಬುದು ಅನಂತರದಲ್ಲಿ ಬೆಳಕಿಗೆ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ