ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ! ಕತ್ತಲಲ್ಲಿ ನಡೆದ ಮದುವೆಯಲ್ಲಿ ಆಯಿತು ಅದಲು ಬದಲು
Team Udayavani, May 9, 2022, 11:39 PM IST
ಭೋಪಾಲ್: ಅಕ್ಕನಿಗೆ ನಿಶ್ಚಯವಾಗಿದ್ದ ವರ ತಂಗಿಯನ್ನು ಹಾಗೂ ತಂಗಿಗೆ ನಿಶ್ಚಯವಾಗಿದ್ದ ವರ ಅಕ್ಕನನ್ನು ಮದುವೆಯಾದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.
ಅಂದ ಹಾಗೆ ಈ ಅದಲು ಬದಲಿಗೆ ಕಾರಣ ಕರೆಂಟ್!
ರಮೇಶ್ಲಾಲ್ ಅವರ ಪುತ್ರಿಯರಾದ ನಿಖೀತಾ ಮತ್ತು ಕರೀಶ್ಮಾಗೆ ಬೇರೆ ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ರೊಂದಿಗೆ ಮದುವೆ ನಿಶ್ಚಯವಾಗಿತ್ತು. ರಾತ್ರಿ ವೇಳೆ ಮದುವೆ ಮುಹೂರ್ತ ನಡೆಯುವಾಗಲೇ ಕರೆಂಟ್ ಹೋಗಿದೆ. ಇಬ್ಬರೂ ವಧುಗಳು ಒಂದೇ ರೀತಿಯ ಬಟ್ಟೆ ತೊಟ್ಟಿದ್ದರಿಂದಾಗಿ ಗೊತ್ತಾಗದೆ, ಅದಲು ಬದಲು ವರನ ಜತೆ ಮದುವೆ ನಡೆದಿದೆ.
ವರರಿಬ್ಬರೂ ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದ ನಂತರವೇ ಈ ಅದಲು ಬದಲು ವಿಚಾರ ತಿಳಿದುಬಂದಿದೆ.
ಮಾರನೇ ದಿನವೇ ಮೂರೂ ಕುಟುಂಬ ಕುಳಿತು ಮಾತನಾಡಿದ್ದು, ಮತ್ತೊಮ್ಮೆ ನಿಶ್ಚಿತ ವರನೊಂದಿಗೆ ಮದುವೆ ಮಾಡಿ, ನಿಖೀತಾ ಮತ್ತು ಕರೀಶ್ಮಾರನ್ನು ಅವರವರ ಗಂಡನ ಮನೆಗೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ : ಪರೀಕ್ಷೆ ಬರೆಯಲು ಹೋದ ಪುತ್ರಿ ತಾಯಿಯ ಕಣ್ಣೆದುರೇ ಯುವಕನೊಂದಿಗೆ ಪರಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ