ರಾಷ್ಟ್ರಪತಿ ಚುನಾವಣೆ: ಔಪಚಾರಿಕಕ್ಕೆ ಮಾತ್ರ ಯಶವಂತ ಸಿನ್ಹಾ ಪ್ರವಾಸ
Team Udayavani, Jul 10, 2022, 8:39 PM IST
ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಈ ತಿಂಗಳ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿ ಯಶವಂತ ಸಿನ್ಹಾ ಈಗ ದೇಶ ಸಂಚಾರ ಕೈಗೊಂಡಿದ್ದಾರೆ. ಉದ್ದೇಶ-ಎಲ್ಲಾ ರಾಜ್ಯಗಳ ರಾಜಧಾನಿಗೆ ತೆರಳಿ ಪ್ರಮುಖ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರುವುದು. ಆದರೆ, ಅವರೊಬ್ಬರೇ ಪ್ರಚಾರ ಕೈಗೊಳ್ಳುತ್ತಿದ್ದಾರೆಯೇ ಹೊರತು, ಅವರ ಜತೆಗೆ ಸಿನ್ಹಾ ಅವರೇ ಕಣಕ್ಕೆ ಇಳಿಯಬೇಕು ಎಂದು ಘೋಷಣೆ ಮಾಡಿದ ನಾಯಕರು ಯಾರೂ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ.
ಮತ್ತೊಂದು ಮಹತ್ವದ ಅಂಶವೆಂದರೆ, ಪ್ರತಿಪಕ್ಷಗಳ ಒಕ್ಕೂಟದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ತನ್ನ ಬೆಂಬಲ ಎಂದು ಆಂತರಿಕವಾಗಿ ಹೇಳಿಕೊಂಡಿದೆ.
ಹೀಗಾಗಿ, ಸಿನ್ಹಾ ಅವರ ರಾಜ್ಯಗಳ ಪ್ರವಾಸ ಏನಿದ್ದರೂ ಔಪಚಾರಿಕವಷ್ಟೇ ಆಗುತ್ತಿದೆ. ಬಿಜೆಪಿಯಲ್ಲಿ ಇದ್ದಾಗ ಸಿನ್ಹಾ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು. ಅದರ ಪ್ರಭಾವ ಈಗ ಕಾಣುತ್ತಿದೆಯೇ ಎಂಬ ಭಾವನೆ ಈಗ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ