12ರ ಹರೆಯದಲ್ಲಿನ ಮದುವೆಗೆ ಪತಿಯ FB ಸಾಕ್ಷ್ಯ: ಮದುವೆ ರದ್ದು


Team Udayavani, Oct 13, 2017, 6:49 PM IST

Bishnoi-700.jpg

ಹೊಸದಿಲ್ಲಿ : ಪತಿಯ ಫೇಸ್‌ ಬುಕ್‌ನಲ್ಲಿ ದಾಖಲಾಗಿದ್ದ ತನ್ನ ವಿವಾಹ ದಿನಾಂಕವನ್ನೇ ಸಾಕ್ಷ್ಯವಾಗಿ ಬಳಸಿಕೊಂಡ ರಾಜಸ್ಥಾನದ 19ರ ಹರೆಯದ ಸುಶೀಲಾ ಬಿಷ್ಣೋಯಿ, ತಾನು ಆಪ್ರಾಪ್ತ ವಯಸ್ಸಿನವಳಿದ್ದಾಗ ನಡೆದಿದ್ದ ತನ್ನ ಮದುವೆಯನ್ನು ನ್ಯಾಯಾಲಯದ ಮೂಲಕ ರದ್ದು ಪಡಿಸಿಕೊಂಡಿರುವ ಕುತೂಹಲಕಾರಿ ಘಟನೆ ವರದಿಯಾಗಿದೆ.

“ನಮ್ಮ ಮದುವೆಯ ನಿಶ್ಚತಾರ್ಥ ನಡೆದದ್ದೇ ಇಲ್ಲ’ ಎಂದಿದ್ದ ಸುಶೀಲಾ ಳ ಪತಿ, ಆಕೆಯ ಕೇಸನ್ನು ವಿಫ‌ಲಗೊಳಿಸುವ ಸರ್ವ ಯತ್ನ ಮಾಡಿದ್ದ. ಕೇಸು ಹಿಂಪಡೆಯುವಂತೆ ಸುಶೀಲಾಗೆ ಧಮ್‌ಕಿಯನ್ನೂ ಹಾಕಿದ್ದ, ಆದರೆ ಅದ್ಯಾವುದೂ ಫ‌ಲಿಸಲಿಲ್ಲ. 

ಸುಶೀಲಾ ಳ ಅಕ್ರಮ ಮದುವೆಯನ್ನು ರದ್ದುಪಡಿಸುವಲ್ಲಿ ಆಕೆಗೆ ನೆರವಾದವಳು ರಾಜಸ್ಥಾನದಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಹೋರಾಡುವ ಸಾರಥಿ ಟ್ರಸ್ಟ್‌ ಎಂಬ ಸೇವಾ ಸಂಘಟನೆಯ ಕಾರ್ಯಕರ್ತೆ ಕೃತಿ ಭಾರತಿ.

ಸುಶೀಲಾ ಬಿಷ್ಣೋಯಿ ಮದುವೆ ನಡೆದದ್ದು ಆಕೆ 12 ವರ್ಷ ಪ್ರಾಯದವಳಿದ್ದಾಗ, 2010ರಲ್ಲಿ ರಾಜಸ್ಥಾನದ ಬಾರ್‌ವೆುರ್‌ ಜಿಲ್ಲೆಯಲ್ಲಿ ನಡೆದಿದ್ದ ರಹಸ್ಯ ವಿವಾಹ ಸಮಾರಂಭದಲ್ಲಿ.

ರಾಜಸ್ಥಾನದಲ್ಲಿ  ಹುಡುಗಿಯರನ್ನು ಚಿಕ್ಕವರಿರುವಾಗಲೇ ಮದುವೆ ಮಾಡಿಕೊಡುವುದು ಸಾಮಾನ್ಯ. ಹೀಗೆ ಮನೆಯವರ ಬಲವಂತದಿಂದ ವಿವಾಹ ಬಂಧನಕ್ಕೆ ಒಳಗಾಗುವ  ಹೆಣ್ಣು ಮಕ್ಕಳು 18ರ ಹರೆಯ ತುಂಬುವ ತನಕ ಹೆತ್ತವರ ಮನೆಯಲ್ಲೇ ಇರುತ್ತಾರೆ. ಅನಂತರ ಅವರನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಪ್ರಸ್ತ ನೆರವೇರುವಂತೆ ಮಾಡುತ್ತಾರೆ. 

12ರ ಹರೆಯದಲ್ಲೇ ಹೆತ್ತವರಿಂದ ಮದುವೆ ಮಾಡಿಸಲ್ಪಟ್ಟಿದ್ದ  ಸುಶೀಲಾ ಬಿಷ್ಣೋಯಿ ಹದಿನೆಂಟರ ಹರೆಯದ ವರೆಗೂ ಹೆತ್ತವರ ಮನೆಯಲ್ಲಿದ್ದುಕೊಂಡು ಶಿಕ್ಷಣ ನಡೆಸಿದಳು. ಆಗ ಆಕೆಯನ್ನು ಗಂಡನ ಮನೆಗೆ ಕಳುಹಿಸಲು ಹೆತ್ತವರು ಸಿದ್ಧತೆ ನಡೆಸಿದರು.

ಆದರೆ ಸುಶೀಲಾಗೆ ತನ್ನನ್ನು ವರಿಸಿದಾತನು ಕುಡುಕನೆಂಬ ವಿಷಯ ಗೊತ್ತಾಯಿತು. ಉನ್ನತ ಶಿಕ್ಷಣ ನಡೆಸುವಾಸೆ ಆಕೆಯಲ್ಲಿ ತೀವ್ರವಾಗಿತ್ತು. ಆದರೆ ಹೆತ್ತವರ ಒತ್ತಡ ತಾಳಲಾರದೆ ಸುಶೀಲಾ ಒಂದು ದಿನ ಮನೆ ಬಿಟ್ಟು ಓಡಿ ಹೋದಳು. 

ಆಗ ಆಕೆಯ ಅದೃಷ್ಟಕ್ಕೆ ಆಕೆಗೆ ಸಾರಥಿ ಟ್ರಸ್ಟ್‌ ನ ಕಾರ್ಯಕರ್ತೆ ಕೃತಿ ಭಾರತಿ ಅವರ ಪರಿಚಯವಾಯಿತು. ಕೃತಿ ಅವರು ಸುಶೀಲಾಳ ಗೋಳನ್ನು ಅರ್ಥ ಮಾಡಿಕೊಂಡು ಆಕೆಯ ಕಾನೂನು ಬಾಹಿರ ಮದುವೆಯನ್ನು ಸಾಬೀತುಪಡಿಸುವ ಸಾಕ್ಷ್ಯವನ್ನು ಸಂಗ್ರಹಿಸಲು ಮುಂದಾದರು.

ಆಗ ಸುಶೀಲಾ ತನ್ನ ಪತಿಯ ಫೇಸ್‌ ಬುಕ್‌ನಲ್ಲಿ ದಾಖಲಾಗಿದ್ದ ತನ್ನ ಮದುವೆ ದಿನಾಂಕವನ್ನು ಸಾಕ್ಷ್ಯವಾಗಿ ಕಾಣಿಸಿದಳು. ಪ್ರತೀ ವರ್ಷ ಮದುವೆ ದಿನಾಂಕದಂದು ಪತಿಯ ಅನೇಕ ಗೆಳೆಯರು, ಬಂಧುಗಳು ಆತನಿಗೆ ವೈವಾಹಿಕ ಶುಭಾಶಯ ಕೋರುವುದನ್ನು ಸಾಕ್ಷ್ಯವಾಗಿ ಬಳಸಲು ಅನುಕೂಲವಾಯಿತು. 

ಈ ಸಾಕ್ಷ್ಯವನ್ನು ಸ್ವೀಕರಿಸಿದ ನ್ಯಾಯಾಲಯ ಸುಶೀಲಾ ಬಿಷ್ಣೋಯಿ ಮದುವೆ ಆಕೆ ಅಪ್ರಾಪ್ತ ವಯಸ್ಸಿನವಳಿದ್ದಾಗ, 12ರ ಹರೆಯದಲ್ಲೇ ನಡೆದಿತ್ತು ಎನ್ನುವುದನ್ನು ಒಪ್ಪಿಕೊಂಡು ಕಳೆದ ಸೋಮವಾರ ಆಕೆಯ ಈ ಅಕ್ರಮ ವಿವಾಹವನ್ನು ರದ್ದುಪಡಿಸಿತು.

ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಅಪ್ತಾಪ್ತ ವಯಸ್ಸಿನ ಪತ್ನಿಯ ಜತೆಗೆ ಪತಿಯು ನಡೆಸುವ ಸೆಕ್ಸ್‌ ರೇಪ್‌ ಎನಿಸಿಕೊಳ್ಳುತ್ತದೆ ಎಂದು ತೀರ್ಪು ನೀಡಿರುವುದು ಉಲ್ಲೇಖನೀಯವಾಗಿದೆ.  

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.