ಲೋಕಸಭೆಯಲ್ಲಿ ಜನಹಿತದ ವಿಚಾರಗಳ ಚರ್ಚೆ
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ
Team Udayavani, Dec 17, 2022, 6:15 AM IST
ನವದೆಹಲಿ:ಭಾರತ-ಚೀನ ಗಡಿ ವಿವಾದದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟುಹಿಡಿದ ಕಾರಣ ಶುಕ್ರವಾರವೂ ರಾಜ್ಯಸಭೆಯಲ್ಲಿ ಕಲಾಪ ಸರಿಯಾಗಿ ನಡೆದಿಲ್ಲ. ಆದರೆ, ಲೋಕಸಭೆಯಲ್ಲಿ ಮಾತ್ರ ರಸ್ತೆ ಸಂಪರ್ಕ, ಎಲ್ಲ ಚುನಾವಣೆಗಳಿಗೂ ಒಂದೇ ವೋಟರ್ ಲಿಸ್ಟ್, ಮಾಲಿನ್ಯ, ಹಣಕಾಸು ಹಂಚಿಕೆ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳ ಕುರಿತು ಶುಕ್ರವಾರ ಉತ್ತಮ ಚರ್ಚೆ ನಡೆದಿದೆ.
ಶಿವಸೇನೆ ಸಂಸದ ವಿನಾಯಕ ರಾವತ್ ಅವರು, ಪಿಂಚಣಿ ಹಾಗೂ ಇತರೆ ನಿವೃತ್ತಿ ಯೋಜನೆಗಳ ಪರಿಷ್ಕರಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಬಿಜೆಪಿ ಸಂಸದ ಸುದರ್ಶನ್ ಭಗತ್ ಅವರು, ಆಯುಷ್ಮಾನ್ ಭಾರತ್ ಯೋಜನೆಯು ದುರ್ಬಳಕೆಯಾಗುತ್ತಿರುವ ಬಗ್ಗೆ ಸದನದ ಗಮನ ಸೆಳೆದರು.
ಇನ್ನು, ಪ್ರತಿ ಚುನಾವಣೆಯಲ್ಲೂ ಪ್ರತ್ಯೇಕ ವೋಟರ್ ಲಿಸ್ಟ್ ಸಿದ್ಧಪಡಿಸುವುದರಿಂದ ಸಂಪನ್ಮೂಲಗಳು ವ್ಯರ್ಥವಾಗುತ್ತಿದ್ದು, “ಒಂದು ದೇಶ-ಒಂದು ಮತದಾರರ ಪಟ್ಟಿ’ಯನ್ನು ಜಾರಿ ಮಾಡಬೇಕು ಎಂದು ಬಿಜೆಪಿ ಸಂಸದ ವಿನೋದ್ ಕುಮಾರ್ ಸೊಂಕಾರ್ ಆಗ್ರಹಿಸಿದರು.
ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಖ್ ಅವರು ಪೂರ್ವ ಮತ್ತು ಪಶ್ಚಿಮ ಅಸ್ಸಾಂ ಅನ್ನು ಸಂಪರ್ಕಿಸುವ ಹೆದ್ದಾರಿ ಕುರಿತು ಧ್ವನಿಯೆತ್ತಿದರೆ, ಎನ್ಸಿ ಸಂಸದ ಹಸ್ನೆ„ನ್ ಮಸೂದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಸಂಪರ್ಕ ಸುಧಾರಿಸುವಂತೆ ಹಾಗೂ ಸುರಂಗಗಳ ಮೂಲಕ ಸಂಚಾರ ಸುಗಮಗೊಳಿಸುವಂತೆ ಕೋರಿಕೊಂಡರು.
ಈ ನಡುವೆ, ಹಿಮಾಚಲ ಪ್ರದೇಶದ ಹಟ್ಟಿà ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.
ಖರ್ಗೆ ಆಕ್ಷೇಪ:
ರಾಜ್ಯಸಭೆಯಲ್ಲಿ ತಮಗೆ ಮತ್ತು ಇಬ್ಬರು ಗಣ್ಯ ಸದಸ್ಯರು ಯಾವಾಗ ಬೇಕಿದ್ದರೂ ಮಾತನಾಡಬಹುದು ಎಂದು ಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು ಭರವಸೆ ನೀಡಿದ್ದರೂ, ತಮಗೆ ಸದನದಲ್ಲಿ ಮಾತನಾಡಲು ಅವಕಾಶ ಕಲ್ಪಿಸುತ್ತಿಲ್ಲವೇಕೆ ಎಂದು ಶುಕ್ರವಾರ ರಾಜ್ಯಸಭೆ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಲು ನಾನು ಬಯಸಿದರೂ, ನನಗೆ ಅನುಮತಿ ನಿರಾಕರಿಸಲಾಯಿತು ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅರುಣಾಚಲದಲ್ಲಿ 3,097 ಕಿ.ಮೀ. ರಸ್ತೆ ನಿರ್ಮಾಣ
ಕಳೆದ 5 ವರ್ಷಗಳಲ್ಲಿ ಗಡಿ ರಸ್ತೆ ಸಂಸ್ಥೆ(ಬಿಆರ್ಒ)ಯು ಅರುಣಾಚಲ ಪ್ರದೇಶದಲ್ಲಿ 3,097 ಕಿ.ಮೀ. ಮತ್ತು ಲಡಾಖ್ನಲ್ಲಿ 3,140 ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡಿದೆ ಎಂದು ಲೋಕಸಭೆಗೆ ಸಚಿವ ಅಜಯ್ ಭಟ್ ಮಾಹಿತಿ ನೀಡಿದ್ದಾರೆ. 2020ರಲ್ಲಿ ಪೂರ್ವ ಲಡಾಖ್ನಲ್ಲಿ ಭಾರತ-ಚೀನಾ ಘರ್ಷಣೆ ನಡೆದ ಬಳಿಕ ಭಾರತವು ಎಲ್ಎಸಿಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿದೆ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ