ಜೂನ್ 20ರಿಂದ ರಾಜ್ಯಸಭೆ ಅಧಿವೇಶನ
Team Udayavani, Jun 4, 2019, 5:50 AM IST
ಹೊಸದಿಲ್ಲಿ: ರಾಜ್ಯಸಭೆ ಬಜೆಟ್ ಅಧಿವೇಶನ ಜೂನ್ 20 ರಂದು ಆರಂಭವಾಗಲಿದ್ದು, ಜುಲೈ 26 ರ ವರೆಗೆ ನಡೆಯಲಿದೆ. ಲೋಕಸಭೆ ಕಲಾಪ ಜೂನ್ 17 ರಿಂದ ಆರಂಭವಾಗಲಿದೆ.
ಮೊದಲ ದಿನ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅನಂತರ ಜೂನ್ 19ರಂದು ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 20ರಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಲಿ ದ್ದಾರೆ. ಇದೇ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.