ಸಾಕಾರಗೊಂಡ ಸರ್ದಾರ್ ಪಟೇಲ್ ಕನಸು
Team Udayavani, Aug 6, 2019, 5:49 AM IST
ಭಾರತದ ಉಕ್ಕಿನ ಮನುಷ್ಯ ಎಂಬ ಖ್ಯಾತಿ ಹೊಂದಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್, ಸ್ವಾತಂತ್ರ್ಯನಂತರ ಇಡೀ ದೇಶವನ್ನು ಒಗ್ಗೂಡಿಸಲು ಬಲವಾಗಿ ಶ್ರಮಿಸಿದ್ದರು. ಭಾರತದ ಬಹುತೇಕ ರಾಜ್ಯಗಳು ಹೆಚ್ಚು ಶ್ರಮವಿಲ್ಲದೇ, ಭಾರತ ಸರಕಾರವನ್ನು ಒಪ್ಪಿಕೊಂಡವು. ಸವಾಲಾಗಿದ್ದು ಹೈದರಾಬಾದ್, ಜುನಾಗಢ ಮತ್ತು ಜಮ್ಮು-ಕಾಶ್ಮೀರ ಮಾತ್ರ.
ಈ ಪೈಕಿ ಮೊದಲೆರಡು ಸ್ಥಳಗಳಲ್ಲಿ ಮುಸ್ಲಿಂ ರಾಜ, ಹಿಂದು ಪ್ರಜೆಗಳು ಇದ್ದರು. ಸೇನಾ ಕಾರ್ಯಾ ಚರಣೆ ಮೂಲಕ ಇವೆರಡನ್ನು ಪಟೇಲ್ ವಶಪಡಿಸಿಕೊಂಡರು. ಆದರೆ ಹಿಂದು ರಾಜ, ಮುಸ್ಲಿಂ ಪ್ರಜೆಗಳು ಇದ್ದ ಜಮ್ಮು ಕಾಶ್ಮೀರವನ್ನು ವಶಪಡಿಸಿಕೊಳ್ಳು ವುದು ದೊಡ್ಡ ಸಾಹಸವಾಗಿತ್ತು. ಆ ಹಂತದಲ್ಲಿ ಹಲವಾರು ಸುತ್ತಿನ ಮಾತುಕಥೆ ನಂತರ, ಮಹಾರಾಜ ಹರಿಸಿಂಗ್ ಭಾರತಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದರು.ನೆಹರೂ ಮತ್ತು ಶೇಖ್ ಅಬ್ದುಲ್ಲಾ ನಡುವೆ ಒಪ್ಪಂದದ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಯಿತು. ಇಲ್ಲಿಯವರೆಗೆ ಭೌಗೋಳಿಕವಾಗಿ ಭಾರತದಲ್ಲಿದ್ದರೂ, ಭಾವನಾತ್ಮಕವಾಗಿ ಕಾಶ್ಮೀರ ಪ್ರತ್ಯೇಕತೆ ಹೊಂದಿತ್ತು.
ಇದೀಗ 370ನೇ ವಿಧಿ ರದ್ದಾಗಿದ್ದರಿಂದ ಆ ರಾಜ್ಯಕ್ಕೂ ಭಾರತದ ಇತರೆಡೆ ಅನ್ವಯವಾಗುವ ಕಾನೂನುಗಳೆಲ್ಲ ಅನ್ವಯವಾಗುತ್ತವೆ. ಇಲ್ಲಿಗೆ ಜಮ್ಮುಕಾಶ್ಮೀರವನ್ನು ಪೂರ್ಣವಾಗಿ ಭಾರತದ ಗಣತಂತ್ರದೊಳಗೆ ವಿಲೀನ ಮಾಡುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕನಸು ನಿಜಕ್ಕೂ ನನಸಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ