Assam NRC ಆಕ್ಷೇಪ, ಕ್ಲೇಮು ಸ್ವೀಕಾರ ದಿನ ಮುಂದಕ್ಕೆ ಹಾಕಿದ ಸುಪ್ರೀಂ
Team Udayavani, Sep 5, 2018, 3:34 PM IST
ಹೊಸದಿಲ್ಲಿ : ಅಸ್ಸಾಂ ಎನ್ಆರ್ಸಿ (ಪೌರರ ರಾಷ್ಟ್ರೀಯ ರಿಜಿಸ್ಟ್ರಿ) ಆಕ್ಷೇಪ, ಕ್ಲೇಮುಗಳನ್ನು ಸ್ವೀಕರಿಸುವ ದಿನಾಂಕವನ್ನು ಮುಂದಕ್ಕೆ ಹಾಕಿದೆ.
ಎನ್ಆರ್ಸಿ ಸಂಚಾಲಕ ಪ್ರತೀಕ್ ಹಜೇಲಾ ಅವರ ವರದಿಗೆ ಪ್ರತಿಯಾಗಿ ಉತ್ತರ ಸಲ್ಲಿಸುವಂತೆ ಕೇಂದ್ರ ಮತ್ತು ಇತರ ಹಿತಾಸಕ್ತಿದಾರರನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನು ಸುಪ್ರೀಂ ಕೋರ್ಟ್ ಪೀಠವು ಕೇಳಿಕೊಂಡಿದ್ದು ಈ ಕುರಿತ ಮುಂದಿನ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
ಜಸ್ಟಿಸ್ಗಳಾದ ರಂಜನ್ ಗೊಗೋಯ್ ಮತ್ತು ಆರ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು, ಹಜೇಲಾ ಅವರ ವರದಿಯನ್ನು ಅವಲೋಕಿಸಿತು. ಈ ವರದಿಯಲ್ಲಿ ಹಜೇಲಾ ಅವರು ರಾಜ್ಯದ ಪೌರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸುವ ಕ್ಲೇಮಿಗೆ “ಎ’ ಪಟ್ಟಿಯಲ್ಲಿ ಸೂಚಿಸಲಾಗಿರುವ 15 ದಾಖಲೆ ಪತ್ರಗಳ ಪೈಕಿ ಹತ್ತನ್ನು ಅವಲಂಬಿಸಿದರೆ ಸಾಕೆಂದು ಹೇಳಿದ್ದಾರೆ.
ಅಸ್ಸಾಂ ಕರಡು ಎನ್ಆರ್ಸಿ ಗೆ ಈಚೆಗೆ ಸೇರಿಸಲ್ಪಟ್ಟಿರುವವವ ಪೈಕಿ ಶೇ.10ರಷ್ಟು ಮಂದಿಯ ಸೇರ್ಪಡೆಯನ್ನು ಪುನರ್ ಪರಿಶೀಲಿಸಬಹುದಾಗಿದೆ ಎಂದು ಕಳೆದ ಆ.28ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಕೆಲಸವನ್ನು ಸ್ವತಂತ್ರ ತಂಡವೊಂದು ಮಾಡಬಹುದಾಗಿದೆ ಎಂದೂ ಅದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ