![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಸುಪ್ರೀಂಗೆ ಇನ್ನೂ ಐವರು ಹೊಸ ನ್ಯಾಯಮೂರ್ತಿಗಳು, ಸಂಖ್ಯಾಬಲ 28
Team Udayavani, Feb 17, 2017, 11:31 AM IST
![Supreme Court-700.jpg](https://www.udayavani.com/wp-content/uploads/2017/02/17/Supreme Court-700-620x354.jpg)
ಹೊಸದಿಲ್ಲಿ : ಐವರು ಹೊಸ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂದು ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ವರಿಷ್ಠ ನ್ಯಾಯಮೂರ್ತಿ ಸಹಿತ ಸುಪ್ರೀಂ ಕೋರ್ಟ್ನಲ್ಲಿನ ನ್ಯಾಯಮೂರ್ತಿಗಳ ಸಂಖ್ಯಾಬಲ ಈಗ 28ಕ್ಕೇರಿದೆ.
ಇಂದು ಬೆಳಗ್ಗೆ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಐವರು ಹೊಸ ನ್ಯಾಯಮೂರ್ತಿಗಳೆಂದರೆ ಸಂಜಯ್ ಕಿಷನ್ ಕೌಲ್, ನವೀನ್ ಸಿನ್ಹಾ, ಮೋಹನ್ ಎಂ ಶಂತನಗೌಡರ್, ದೀಪಕ್ ಗುಪ್ತಾ ಮತ್ತು ಎಸ್ ಅಬ್ದುಲ್ ನಝೀರ್.
ಜಸ್ಟಿಸ್ ಕೌಲ್ ಅವರು ಈ ವರೆಗೆ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು. ಜಸ್ಟಿಸ್ ಸಿನ್ಹಾ ಅವರು ರಾಜಸ್ಥಾನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದರು.
ಜಸ್ಟಿಸ್ ಶಂತನಗೌಡರ್ ಮತ್ತು ಜಸ್ಟಿಸ್ ಗುಪ್ತಾ ಅವರು ಅನುಕ್ರಮವಾಗಿ ಕೇರಳ ಮತ್ತು ಛತ್ತೀಸ್ಗಢ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದರು. ಜಸ್ಟಿಸ್ ನಝೀರ್ ಅವರು ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದರು.
ಸುಪ್ರೀಂ ಕೋರ್ಟಿಗೆ ವರಿಷ್ಠ ನ್ಯಾಯಮೂರ್ತಿ ಸಹಿತ ಅನುಮೋದನೆ ಇರುವ ನ್ಯಾಯಮೂರ್ತಿಗಳ ಸಂಖ್ಯಾ ಬಲ 31.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈಚೆಗೆ ಐವರು ಹೊಸ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಆದೇಶಕ್ಕೆ ಸಹಿಹಾಕಿದ್ದರು.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.