ಕಸೌಲಿ : ಸರಕಾರಿ ಮಹಿಳಾ ಅಧಿಕಾರಿಯ ಹತ್ಯೆ : ಸುಪ್ರೀಂ ಕೋರ್ಟ್ ಗರಂ
Team Udayavani, May 2, 2018, 11:44 AM IST
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅನಧಿಕೃತ ನಿರ್ಮಾಣವನ್ನು ಸೀಲ್ ಮಾಡಲು ಹೋಗಿದ್ದ ಮಹಿಳಾ ಸರಕಾರಿ ಅಧಿಕಾರಿಯನ್ನು ಹೊಟೇಲ್ ಮಾಲಕನೊಬ್ಬ ಗುಂಡಿಕ್ಕಿ ಕೊಂದು ಕಸೌಲಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಸ್ವಯಂ ಪ್ರೇರಿತವಾಗಿ ಕೈಗತ್ತಿಕೊಂಡಿದೆ.
ಜಸ್ಟಿಸ್ ಮದನ್ ಬಿ ಲೋಕೂರ್ ಮತ್ತು ಜಸ್ಟಿಸ್ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ, ಕಸೌಲಿ ಹತ್ಯೆ ಪ್ರಕರಣವು ಅತ್ಯಂತ ಗಂಭೀರದ್ದಾಗಿದ್ದು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅನಧಿಕೃತ ನಿರ್ಮಾಣವನ್ನು ಸೀಲ್ ಮಾಡಲು ಹೋಗಿದ್ದ ಮಹಿಳಾ ಅಧಿಕಾರಿಯನ್ನು ಕೊಲ್ಲಲಾಗಿರುವುದು ಕಾನೂನಿನ ವೈಫಲ್ಯವಾಗಿದೆ ಎಂದು ಹೇಳಿತು.
ಸಹಾಯಕ ಟೌನ್ ಆ್ಯಂಡ್ ಕಂಟ್ರಿ ಪ್ಲಾನರ್ ಆಗಿರುವ ಶೈಲಬಾಲಾ ಶರ್ಮಾ ಅವರು ಕಸೌಲಿಯ ನಾರಾಯಣೀ ಗೆಸ್ಟ್ ಹೌಸ್ ಆವರಣದಲ್ಲಿನ ಅನಧಿಕೃತ ನಿರ್ಮಾಣವನ್ನು ಸೀಲ್ ಮಾಡಲು ಹೋಗಿದ್ದಾಗ ಹೊಟೇಲ್ ಮಾಲಕ ವಿಜಯ್ ಸಿಂಗ್ ಎಂಬಾತ ಆಕೆಯನ್ನು ಗುಂಡಿಕ್ಕಿ ಸಾಯಿಸಿದ್ದ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಶೈಲಬಾಲಾ ಶರ್ಮಾ ಅವರು ಅನಂತರ ಕೊನೆಯುಸಿರೆಳೆದಿದ್ದರು.
ಪ್ರಕರಣವನ್ನು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮುಂದೆ ನಾಳೆ ಗುರುವಾರ ಇರಿಸಲಾಗುವುದು ಎಂದು ಪೀಠ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು