ಮುಂಬಯಿ: ಶಿವಸೇನಾ ನಾಯಕ ಅಶೋಕ್ ಸಾವಂತ್ ಇರಿದು ಕೊಲೆ
Team Udayavani, Jan 8, 2018, 11:08 AM IST
ಮುಂಬಯಿ : ಮುಂಬಯಿಯ ಕಾಂದಿವಿಲಿಯಲ್ಲಿ ನಿನ್ನೆ ಭಾನುವಾರ ಶಿವಸೇನೆಯ ನಾಯಕ ಅಶೋಕ್ ಸಾವಂತ್ ಅವರನ್ನು ಹಂತಕರು ಇರಿದು ಕೊಂದಿರುವ ಘಟನೆ ನಡೆದಿದೆ.
ಸಾವಂತ್ ಅವರು ನಿನ್ನೆ ರಾತ್ರಿ 10.45ರ ಹೊತ್ತಿಗೆ ತನ್ನ ಸ್ನೇಹಿತರೋರ್ವರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ ಅವರನ್ನು ಹಂತಕರು ಇರಿದು ಕೊಂದರು. ಮುಂಬಯಿಯ ಮಾಜಿ ಕಾರ್ಪೊರೇಟರ್ ಕೂಡ ಆಗಿರುವ ಸಾವಂತ್ ಅವರು ತಮ್ಮ ಮೇಲೆ ಮಾರಣಾಂತಿಕ ದಾಳಿ ನಡೆದಾಗ ತಮ್ಮ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದರು.
ಸಮತಾ ನಗರದಲ್ಲಿನ ಸುರ್ ಕಟ್ಟಡದಲ್ಲಿನ ಸಾವಂತ್ ಅವರ ಮನೆಯ ಮುಂದೆ ವಾಹನವೊಂದರಲ್ಲಿ ಕಾಯುತ್ತಿದ್ದ ಹಂತಕರು ಸಾವಂತ್ ಅವರನ್ನು ಕಂಡಾಕ್ಷಣ ಅವರ ಬಳಿ ಸಾರಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ತಮ್ಮಲ್ಲಿನ ಹರಿತವಾ ಆಯುಧವನ್ನು ಝಳಪಿಸಿ ಸಾವಂತ್ ಅವರನ್ನು ಬಲವಾಗಿ ಇರಿದು ಸ್ಥಳದಿಂದ ಪರಾರಿಯಾದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ 62ರ ಹರೆಯದ ಸಾಂವತ್ ಅವರನ್ನು ಸ್ಥಳೀಯರು ಒಡನೆಯೇ ಆಸ್ಪತ್ರೆಗೆ ಒಯ್ದರು. ಆದರೆ ಅಲ್ಲಿನ ವೈದ್ಯರು ಸಾವಂತ್ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಐಪಿಸಿ ಸೆ.302ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕೊಲೆ ನಡೆದ ತಾಣದಲ್ಲಿನ ಸಿಸಿಟಿಟಿವಿಯಲ್ಲಿ ದಾಖಲಾದ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಹತ ಸಾವಂತ್ ಅವರು ಈಚೆಗೆ ಕೇಬಲ್ ಉದ್ಯಮವನ್ನು ಪ್ರವೇಶಿಸಿದ್ದರು. ಅವರಿಗೆ ಕೆಲವು ದಿನಗಳಿಂದ ಸುಲಿಗೆ ಕರೆಗಳು ಬರುತ್ತಿದ್ದವು.
ಸಾವಂತ್ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್