ಕುಡಿದ ಅಮಲಿನಲ್ಲಿ ಧಾಂಧಲೆ : ಭೋಜ್ಪುರಿ ನಟ ರಾಜಾ ಮತ್ತೆ ಅರೆಸ್ಟ್
Team Udayavani, Jun 2, 2018, 4:17 PM IST
ಹೊಸದಿಲ್ಲಿ : ಈ ಮೊದಲು ನಟಿ ಶ್ವೇತಾ ತಿವಾರಿ ಅವರನ್ನು ಮದುವೆಯಾಗಿ ಬಳಿಕ ಆಕೆಯಿಂದ ದೂರವಾಗಿ ಸುದ್ದಿಯ ಕೇಂದ್ರವಾಗಿದ್ದ ಭೋಜ್ಪುರಿ ನಟ ರಾಜಾ ಚೌಧರಿ ಇದೀಗ ಮತ್ತೂಮ್ಮೆ ಬಂಧನಕ್ಕೆ ಗುರಿಯಾಗಿದ್ದಾರೆ.
ವರದಿಗಳ ಪ್ರಕಾರ ರಾಜಾ ಚೌಧರಿ ಅವರು ಕುಡಿದ ಅಮಲಿನಲ್ಲಿ ಸೆಟ್ನಲ್ಲಿ ಧಾಂಧಲೆ ನಡೆಸಿ ಉತ್ತರ ಪ್ರದೇಶದ ಪೊಲೀಸರ ವಿರುದ್ಧ ಹರಿಹಾಯ್ದು ಚಿತ್ರ ನಿರ್ಮಾಪಕರು,ಪೊಲೀಸರು ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ಲೈವ್ ಹಿಂದುಸ್ಥಾನ್ ಡಾಟ್ ಕಾಮ್ ವರದಿಯ ಪ್ರಕಾರ ರಾಜಾ ಚೌಧರಿ ಅವರು ಅನೇಕರ ಮೇಲೆ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಫಿಲಂ ಕ್ಯಾಮೆರಾ ನಿರ್ದೇಶಕ ರಾಜು ಆರ್ ದ್ವಿವೇದಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕಾರ ಆತನ ವಿರುದ್ಧ ಪೊಲೀಸರು ಐಪಿಸಿ ಸೆ.323, 504 ಮತ್ತು 506 ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ರಾಜಾ ಅವರು ಚಿತ್ರ ನಿರ್ಮಾಕ ಸರ್ವೇಶ್ ಠಾಕೂರ್ ಅವರ “ಸಂಗಂ ರಿಷ್ತೋಂ ಕಾ’ ಚಿತ್ರದಲ್ಲಿ ನಟಿಸುತ್ತಿದ್ದರು. ಆದರೆ ಸೆಟ್ನಲ್ಲಿ ಅತ್ಯಂತ ವ್ಯಗ್ರರಾಗಿ ಎಲ್ಲರ ವಿರುದ್ಧ ರೇಗುತ್ತಿದ್ದ ಕಾರಣಕ್ಕೆ ಠಾಕೂರ್ ಅವರು ರಾಜಾ ಅವರನ್ನು ತಮ್ಮ ನಿರ್ಮಾಣದಿಂದಲೇ ಹೊರಹಾಕಿದ್ದರು.
ಇದರಿಂದ ಸಿಟ್ಟಿಗೆದ್ದು ಕುಡಿದ ಅಮಲಿನಲ್ಲಿ ಸೆಟ್ಗೆ ಬಂದ ರಾಜಾ, ಠಾಕೂರ್ ಅವರ ಮೇಲೆ ಎರಗಿದರಲ್ಲದೆ ಚಿತ್ರದ ಛಾಯಾಚಿತ್ರಗ್ರಾಹಕ ದ್ವಿವೇದಿ ಅವರ ಮೇಲೂ ಎರಗಿದರು. ಯಾವುದೋ ಒಬ್ಬ ಸಾಧು ತನ್ನ ಮದ್ಯಪಾನದಲ್ಲಿ ಅದೇನೋ ಬೆರೆಸಿ ಕೊಟ್ಟದ್ದೇ ಈ ಎಡವಟ್ಟಿಗೆ ಕಾರಣವಾಯಿತೆಂದು ರಾಜಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ