ಕಾಲುವೆಗೆ ಉರುಳಿ ಬಿದ್ದ ಕಾರು: ಒಂದೇ ಕುಟುಂಬದ 6 ಮಂದಿ ಸಾವು
Team Udayavani, Mar 13, 2019, 6:07 AM IST
ಕೊಯಮುತ್ತೂರು : ಪೊಲ್ಲಾಚಿ ಸಮೀಪ ಇಂದು ಬುಧವಾರ ನಸುಕಿನ ವೇಳೆ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಅವಘಡದಲ್ಲಿ ಕಾರಿನೊಳಗಿದ್ದ ಒಂದೇ ಕುಟುಂಬದ ಎಲ್ಲ ಆರು ಮಂದಿ ಜಲ ಸಮಾಧಿಯಾದರು. ಕಾರಿನಲ್ಲಿದ್ದ ನತದೃಷ್ಟರು ಪಳನಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಹುಟ್ಟೂರಾದ, ನಗರದ ಮಸಕಳಿಪಾಳಯಂಗೆ ಮರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ಕೇದಿಮೇಡು ಎಂಬಲ್ಲಿ ಕಾಲುವೆಗೆ ಉರುಳಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ದೇಹಗಳನ್ನು ಕಾಲುವೆಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.