ನೋಟು ಅಮಾನ್ಯ: ವ್ಯಾಪ್ತಿ ಪರಿಶೀಲನೆಗೆ ಸುಪ್ರೀಂ ಕೋರ್ಟ್ ತೀರ್ಮಾನ
Team Udayavani, Oct 12, 2022, 9:15 PM IST
ನವದೆಹಲಿ: ನೋಟು ಅಮಾನ್ಯ ಪ್ರಕ್ರಿಯೆಯು ಕೇಂದ್ರ ಸರ್ಕಾರದ ನಿರ್ಣಯ. ಇದರ ಹೊರತಾಗಿಯೂ ಕೂಡ ಈ ಬಗ್ಗೆ ಪರಿಶೀಲನೆ ನಡೆಸಲು ವ್ಯಾಪ್ತಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೋಟು ಅಮಾನ್ಯ ಕುರಿತು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್.ಎ.ನಸೀರ್, ನ್ಯಾ. ಬಿ.ಆರ್.ಗವಾಯಿ, ನ್ಯಾ. ಎ.ಎಸ್.ಬೋಪಣ್ಣ, ನ್ಯಾ. ವಿ.ರಾಮಸುಬ್ರಮಣಿಯಂ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ, ಆರ್ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಲು ಸೂಚಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಪಿ.ಚಿದಂಬರಂ, ಈ ರೀತಿಯ ನೋಟು ಅಮಾನ್ಯ ಪ್ರಕ್ರಿಯೆಗೆ ಪ್ರತ್ಯೇಕವಾದ ಕಾಯಿದೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
“ಇದು ಸರ್ಕಾರದ ನೀತಿ ನಿರೂಪಣೆಯ ಭಾಗ. ಇದರ ಹೊರತಾಗಿಯೂ ಕೂಡ ಈ ಬಗ್ಗೆ ನ್ಯಾಯಾಂಗವು ಪರಿಶೀಲನೆ ನಡೆಸಲು ವ್ಯಾಪ್ತಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು,’ ಎಂದು ಪೀಠ ಹೇಳಿತು.