Delhi Flood; ಅಪಾಯದ ಮಟ್ಟ ಮೀರಿದ ಯಮುನೆ: ದೆಹಲಿಯಲ್ಲಿ ಮತ್ತೆ ಕಟ್ಟೆಚ್ಚರ
Team Udayavani, Jul 23, 2023, 12:56 PM IST
ಹೊಸದಿಲ್ಲಿ: ಹರಿಯಾಣದ ಹತ್ನ್ನಿಕುಂಡ್ ಬ್ಯಾರೇಜ್ ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ದೆಹಲಿಯಲ್ಲಿ ಮತ್ತೆ ಅಪಾಯದ ಮಟ್ಟ ದಾಟಿದೆ.
ಇಂದು ಬೆಳಗ್ಗೆ 10 ಗಂಟೆಗೆ ನದಿಯಲ್ಲಿ 206.10 ಮೀಟರ್ ಗಳಷ್ಟು ನೀರು ಹರಿಯುತ್ತಿದೆ. ಸಂಜೆ ವೇಳೆಗೆ ಇದು ಇನ್ನಷ್ಟು ಏರುವ ನಿರೀಕ್ಷೆಯಿದೆ.
ಹರಿಯಾಣದಿಂದ 2 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ.
ಅರವಿಂದ್ ಕೇಜ್ರಿವಾಲ್ ಸರ್ಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ಹೇಳಿದ್ದಾರೆ.
#WATCH | Delhi: Yamuna’s water level crossed the danger mark, recorded at 205.81 meters at 7 am today.
Drone visuals from Old Yamuna Bridge (Loha Pul) pic.twitter.com/BK7q0IhjwV
— ANI (@ANI) July 23, 2023
ಯಮುನಾ ನದಿಯು ಈಗ ಒಂದು ವಾರದಿಂದ ಉಕ್ಕಿ ಹರಿಯುತ್ತಿದೆ. ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಹರಿಯಾಣ ಬ್ಯಾರೇಜ್ ನಿಂದ ನೀರು ಬಿಡುವುದೇ ನೀರಿನ ಮಟ್ಟದಲ್ಲಿ ನಿರಂತರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹಿಮಾಚಲದಲ್ಲಿ ಮಾನ್ಸೂನ್ ಬಿರುಸಿನ ಹಿನ್ನೆಲೆಯಲ್ಲಿ ಬ್ಯಾರೇಜ್ ಗೆ ಭಾರಿ ಪ್ರಮಾಣದ ನೀರು ಬಂದಿದೆ.