ಅಪಹೃತ ಭಾರತೀಯರ ಬಿಡುಗಡೆಗೆ ಮಾತುಕತೆ
Team Udayavani, Jul 11, 2017, 11:19 AM IST
ಮೊಸೂಲ್/ಹೊಸದಿಲ್ಲಿ: ಹಲವು ತಿಂಗಳ ಸತತ ಹೋರಾಟದ ಬಳಿಕ ಐಸಿಸ್(ಇಸ್ಲಾಮಿಕ್ ಸ್ಟೇಟ್) ಉಗ್ರರಕಪಿ ಮುಷ್ಟಿಯಿಂದ ಮೊಸೂಲ್ ನಗರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಇರಾಕ್ ಸೇನೆ ಘೋಷಿಸಿದ ಬೆನ್ನಲ್ಲೇ ಉಗ್ರರಿಂದ ಅಪಹರಣಕ್ಕೀಡಾದ ಭಾರತೀಯರ ಕುರಿತ ಪ್ರಸ್ತಾಪ ಮುನ್ನಲೆಗೆ ಬಂದಿದೆ.
2014ರಲ್ಲಿ ಮೊಸೂಲ್ ನಗರದಲ್ಲಿ ಉಗ್ರರು 39 ಮಂದಿ ಭಾರತೀಯರನ್ನು (ಈ ಪೈಕಿ ಬಹು ತೇಕ ಮಂದಿ ಪಂಜಾಬ್ನವರು) ಅಪಹರಿಸಿದ್ದರು. 3 ವರ್ಷಗಳಾದರೂ ಒತ್ತೆಯಾಳುಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಮೊಸೂಲ್ ನಗರವು ಇರಾಕ್ ಸೇನೆಯ ವಶಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಇರಾಕ್ ಸರಕಾರವನ್ನು ಸಂಪರ್ಕಿಸಿ, ಭಾರತೀಯರ ಪತ್ತೆ ಹಾಗೂ ಬಿಡುಗಡೆ ಕುರಿತು ಪ್ರಸ್ತಾಪಿಸಿದೆ. ಇವರ ಬಿಡುಗಡೆಗೆ ಎಲ್ಲ ರೀತಿ ನೆರವು ನೀಡುವುದಾಗಿ ಇರಾಕ್ ಸರಕಾರ ಭರವಸೆ ನೀಡಿದೆ ಎಂದು ಸೋಮವಾರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ವಿದೇಶಾಂಗ ಇಲಾಖೆ ಸಹಾ ಯಕ ಸಚಿವ ಜ.ವಿ.ಕೆ.ಸಿಂಗ್ ಸೋಮವಾರವೇ ಇರಾಕ್ನ ಎರ್ಬಿಲ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಸುಷ್ಮಾಗೆ ಒತ್ತಾಯ: ಇದಕ್ಕೂ ಮುನ್ನ, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಭಾರತೀಯ ಅಪಹೃತರ ಬಿಡುಗಡೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸುಷ್ಮಾ, “39 ಭಾರತೀಯರನ್ನೂ ಕರೆತರಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಭರವಸೆ ನೀಡಿದ್ದರು.
ಟೈಗ್ರಿಸ್ ನದಿಗೆ ಹಾರಿದ ಐಸಿಸ್ ಉಗ್ರರು!
ಇರಾಕ್ನ ಪ್ರಮುಖ ನಗರ ಮೊಸೂಲ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡು ಕೇಕೆ ಹಾಕುತ್ತಿದ್ದ ಐಸಿಸ್ ಉಗ್ರರಿಗೆ ರವಿವಾರ ಆಘಾತ ಕಾದಿತ್ತು. ಇರಾಕ್ ಸೇನೆಯು ಮೊಸೂಲ್ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ, ಸೋಲಿನ ರುಚಿ ಕಂಡ ಉಗ್ರರು ದಿಕ್ಕಾಪಾಲಾಗಿ ಓಡಿದರು. ವಿಶೇಷವೆಂದರೆ, ಹಲವು ಉಗ್ರಗಾಮಿಗಳು ರಣಾಂಗಣದಿಂದ ಹಿಂದೆ ಸರಿದಿದ್ದಲ್ಲದೆ, ಟೈಗ್ರಿಸ್ ನದಿಗೆ ಹಾರಿ ಪ್ರಾಣ ಬಿಟ್ಟರು ಎಂದು ಸೇನೆ ಹೇಳಿದೆ. ಈಜಲು ಗೊತ್ತಿದ್ದ ಕೆಲವರು ನದಿಯಲ್ಲಿ ಈಜಿ ಬಚಾವಾಗಲು ಯತ್ನಿಸಿದ್ದು, 30 ಮಂದಿ ಉಗ್ರರನ್ನು ಸೇನೆ ಸದೆಬಡಿದಿದೆ. ಸತತ 8 ತಿಂಗಳ ಹೋರಾಟದ ಬಳಿಕ ಸೇನೆ ರವಿವಾರ ಕೊನೆಯ ಹಂತದ ಕಾರ್ಯಾಚರಣೆಯಾಗಿ ಗುಂಡಿನ ದಾಳಿ ಹಾಗೂ ವೈಮಾನಿಕ ದಾಳಿ ನಡೆಸಿತ್ತು. ಉಗ್ರರ ದಮನದ ಬಳಿಕ ಟೈಗ್ರಿಸ್ ನದಿ ತಟದಲ್ಲಿ ಇರಾಕ್ ಧ್ವಜವನ್ನು ಹಾರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ