Telangana Election; ಮಗನ ಮಾತು ಕೇಳದೆ ಚುನಾವಣೆ ಸೋತರೆ ಕೆಸಿಆರ್..; ಒಂದು ವಿಶ್ಲೇಷಣೆ
Team Udayavani, Dec 5, 2023, 12:44 PM IST
ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಸತತ ಹತ್ತು ವರ್ಷ ಅಧಿಕಾರ ನಡೆಸಿದ ಕೆ.ಚಂದ್ರಶೇಖರ್ ರಾವ್ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಪಡೆದಿದೆ. ಎರಡು ಅವಧಿ ಅಧಿಕಾರದಲ್ಲಿದ್ದ ಬಿಆರ್ ಎಸ್ ಪಕ್ಷವು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದ್ದರೆ, ಬಿಆರ್ಎಸ್ ಕೇವಲ 39 ಸ್ಥಾನಗಳನ್ನು ಪಡೆದುಕೊಂಡಿದೆ.
ತೆಲಂಗಾಣ ಸ್ಥಾಪನೆ ವಿಚಾರದಲ್ಲಿ ಅಧಿಕಾರ ಪಡೆದ ಕೆಸಿಆರ್ ಎರಡು ಅವಧಿಯ ಬಳಿಕ ಆಡಳಿತ ವಿರೋಧಿ ಸವಾಲು ಎದುರಿಸಲಾಗಿದೆ ಸೋಲನುಭವಿಸಿದ್ದಾರೆ.
ಇದನ್ನೂ ಓದಿ:Cricket; ಟೀಂ ಇಂಡಿಯಾದ ಈ ಪದ್ದತಿ ಇಷ್ಟವಾಗುವುದಿಲ್ಲ..: ಕಿಡಿಕಾರಿದ ಮಾಜಿ ಆಟಗಾರ
ಚುನಾವಣಾ ಪ್ರಚಾರದಲ್ಲಿ, ಪಕ್ಷವು ಬಡವರಿಗಾಗಿ ಮಾಡಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿತು. ಆದಾಗ್ಯೂ, ಕೆಲವು ಯೋಜನೆಗಳ ಅನುಷ್ಠಾನವು ಹಣ ಹಂಚಿಕೆಯ ಬಗ್ಗೆ ನಿರ್ಧರಿಸಲು ಶಾಸಕರಿಗೆ ಮಿತಿಮೀರಿದ ಅಧಿಕಾರವನ್ನು ನೀಡಿದ್ದು ತಾರತಮ್ಯ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಕಾರಣವಾಯಿತು.
ಕೆಸಿಆರ್ ಅವರ ಪುತ್ರ ಮತ್ತು ಐಟಿ ಸಚಿವ ಕೆಟಿ ರಾಮರಾವ್ ಅವರು ತೆಲಂಗಾಣದಲ್ಲಿ ಉದ್ಯೋಗ ಸೃಷ್ಟಿ ಮತ್ತು ಜಿಡಿಪಿ ಬೆಳವಣಿಗೆಯು ದೇಶದಲ್ಲೇ ಅತ್ಯಧಿಕವಾಗಿದೆ ಎಂದು ಹೇಳಿಕೊಂಡಿದ್ದರು, ಆದರೆ ಅನೇಕ ವರ್ಗಗಳು ಉದ್ಯೋಗವನ್ನು ಪಡೆಯುವುದು ಸಮಸ್ಯೆಯಾಗಿದೆ ಎಂದು ದೂರಿವೆ.
ಚುನಾವಣೆಗೆ ಮುನ್ನ, ಹೊಸ ಮುಖಗಳನ್ನು ಕರೆತಂದು ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸುಮಾರು 30 ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಕೆಟಿಆರ್ ಅವರು ಮುಖ್ಯಮಂತ್ರಿಗೆ ಸಲಹೆ ನೀಡಿದ್ದರು. ಸಿಎಂ ಕೆಸಿಆರ್ ಅವರು ಈ ಶಾಸಕರಿಗೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಎಚ್ಚರಿಕೆ ನೀಡಿದ್ದರು, ಆದರೆ ಕೊನೆಗೂ ಅವರೆಲ್ಲರಿಗೂ ಚುನಾವಣಾ ಟಿಕೆಟ್ ನೀಡಿದ್ದರು. ಹೀಗಾಗಿ ಫಲಿತಾಂಶ ಬಂದಾಗ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ.
ಮತ್ತೊಂದೆಡೆ, ಮೊದಲ ಬಾರಿಗೆ ಬಿಆರ್ಎಸ್ ಪ್ರತಿನಿಧಿಸಿದ್ದ 10 ನಾಯಕರ ಪೈಕಿ 9 ಮಂದಿ ವಿಜಯಶಾಲಿಯಾಗಿದ್ದಾರೆ.
ಮುಂದೆ ಪುಟಿದೇಳಲು ಬಿಎಆರ್ ಎಸ್ ಗ್ರಾಮೀಣ ವಲಯದಲ್ಲಿ ಹೆಚ್ಚು ಒಲವು ತೋರಿಸುವ ಅಗತ್ಯವಿದೆ. ಬಿಆರ್ ಎಸ್ ಗೆದ್ದ 39 ಸ್ಥಾನಗಳ ಪೈಕಿ ಅರ್ಧದಷ್ಟು ಸ್ಥಾನಗಳು ಹೈದರಾಬಾದ್ ವಲಯದಿಂದಲೇ ಬಂದಿದೆ, ಇಲ್ಲಿ ಅಭಿವೃದ್ಧಿ ಮತ್ತು ಐಟಿ ಪಾರ್ಕ್ಗಳ ಬಗ್ಗೆ ಕೆಟಿಆರ್ ಅವರ ನಿಲುವಿಗೆ ಮತದಾರ ಬೆಂಬಲ ನೀಡಿದ್ದಾನೆ.