ಎನ್ ಕೌಂಟರ್ ಮಾಡಿ ಉಗ್ರನನ್ನು ಹತ್ಯೆಗೈದ ಭದ್ರತಾ ಪಡೆ
Team Udayavani, Feb 28, 2023, 8:23 AM IST
ಶ್ರೀನಗರ: ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಓರ್ವ ಉಗ್ರನನ್ನು ಎನ್ ಕೌಂಟರ್ ಮಾಡಿರುವ ಘಟನೆ ಜಮ್ಮು & ಕಾಶ್ಮೀರದ ಅವಂತಿಪೋರಾದಲ್ಲಿ ಮಂಗಳವಾರ ಮುಂಜಾನೆ (ಫೆ28 ರಂದು) ನಡೆದಿದೆ.
ಕಾಶ್ಮೀರ ಪೊಲೀಸ್ ಝೋನ್ ಈ ಬಗ್ಗೆ ಮಾಹಿತಿ ಕೊಟ್ಟಿದ್ದು, ಪುಲ್ವಾಮಾ ಜಿಲ್ಲೆಯ ಪಡಗಂಪೋರಾ, ಅವಂತಿಪೋರಾದಲ್ಲಿ ಎನ್ಕೌಂಟರ್ ಆರಂಭವಾಗಿದೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಎನ್ ಕೌಂಟರ್ ಮಾಡಿ ಹತ್ಯೆಗೈಯಲಾಗಿದೆ. ಈ ಬಗ್ಗೆ ಪೊಲೀಸರು ಮತ್ತು ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿ ಕಾರ್ಯಪ್ರವೃತ್ತವಾಗಿವೆ. ಉಗ್ರರ ವಿರುದ್ಧ ಕಾರ್ಯಚರಣೆ ನಡೆಯುತ್ತಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದಾಗಿ ಹೇಳಿದೆ.
ಪುಲ್ವಾಮದಲ್ಲಿ ಭಾನುವಾರ ಸಂಜಯ್ ಶರ್ಮಾ ಎಂಬ ಕಾಶ್ಮೀರಿ ಪಂಡಿತ್ ಹತ್ಯೆಯ ಬಳಿಕ ಈ ಎನ್ ಕೌಂಟರ್ ನಡೆದಿದೆ. ಕಳೆದ ವರ್ಷ ನಾಗರಿಕರ ಮೇಲೆ ಉಗ್ರರು 30 ದಾಳಿ ನಡೆಸಿದ್ದರು. ಮೂವರು ಕಾಶ್ಮೀರಿ ಪಂಡಿತರು, ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್, ಜಮ್ಮುವಿನ ಮಹಿಳಾ ಶಿಕ್ಷಕಿ ಮತ್ತು ಎಂಟು ಸ್ಥಳೀಯ ಕೆಲಸಗಾರರು ಸೇರಿದಂತೆ 18 ಜನರು ಈ ದಾಳಿಯಲ್ಲಿ ಮೃತಪಟ್ಟಿದ್ದರು.