ಹಾಡುತ್ತಲೇ ಪ್ರಾಣ ಬಿಟ್ಟ ತಂದೆ
Team Udayavani, May 29, 2019, 6:12 AM IST
ತಿರುವನಂತಪುರ: ಕೇರಳದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆ ಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿ. ವಿಷ್ಣು ಪ್ರಸಾದ್ ಎಂಬವರು ತಮ್ಮ ಪುತ್ರಿಯ ಮದುವೆ ಸಮಾರಂಭದಲ್ಲಿ ವೇದಿಕೆ ಮೇಲೆ ಹಾಡು ಹಾಡುತ್ತಾ ಕುಸಿದುಬಿದ್ದು ಸಾವನ್ನಪ್ಪಿ ರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ನೀಂಡಕರಾ ಎಂಬ ಹಳ್ಳಿಯಲ್ಲಿ ನಡೆದಿದೆ. ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಸಂಗೀತ ರಸಮಂಜರಿ ಯಲ್ಲಿ ಹಾಡಲು ಅವರು ಉತ್ಸಾಹದಿಂದಲೇ ವೇದಿಕೆಗೆ ತೆರಳಿದ್ದರು.
ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಕೊಂಡೊ ಯ್ಯುವಷ್ಟರಲ್ಲಿ ಅವರು ನಿಧನ ಹೊಂದಿ ದರು. ಆದರೆ, ಅವರ ಸಾವಿನ ವಿಚಾರವನ್ನು ಮಗಳಿಗೆ ತಿಳಿಸದ ಕುಟುಂಬ ಸದಸ್ಯರು, “ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಬರುತ್ತಾರೆ’ ಎಂದು ಹೇಳುತ್ತಲೇ ಮುಹೂರ್ತ ಯಶಸ್ವಿಯಾಗಿ ಮುಗಿ ಯುವಂತೆ ಮಾಡಿದ್ದಾರೆ.