ಬ್ರಹ್ಮೋಸ್ ಕ್ಷಿಪಣಿ ಸಿಡಿದ ಪ್ರಕರಣ: ಮೂವರು ಅಧಿಕಾರಿಗಳು ವಜಾ
Team Udayavani, Aug 24, 2022, 6:55 AM IST
ನವದೆಹಲಿ:ಪಾಕಿಸ್ತಾನ ಗಡಿಯತ್ತ ಆಕಸ್ಮಿಕವಾಗಿ ಬ್ರಹ್ಮೋಸ್ ಕ್ಷಿಪಣಿ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
ಮಾ.9ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಕೋರ್ಟ್ ಆಫ್ ಎನ್ಕ್ವಯರಿ ಮುಕ್ತಾಯಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ತಕ್ಷಣದಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ವಜಾಗೊಂಡಿರುವ ಅಧಿಕಾರಿಗಳ ಹೆಸರು, ಹುದ್ದೆ ಮತ್ತು ಅವರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ತಾಂತ್ರಿಕ ಕಾರಣದಿಂದಾಗಿ ಹೀಗಾಗಿತ್ತು ಎಂದು ಪಾಕಿಸ್ತಾನ ಸರ್ಕಾರಕ್ಕೆ ಕೇಂದ್ರ ಮಾಹಿತಿ ನೀಡಿತ್ತು.