ತಿರುಪತಿಗೂ ಕೋವಿಡ್ ನಷ್ಟ ; ಆರ್ಥಿಕ ಬಿಕ್ಕಟ್ಟು ಎದುರಿಸಲು ಟಿಟಿಡಿ ಚಿಂತನೆ
Team Udayavani, May 12, 2020, 5:57 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ತಿರುಪತಿ/ತಿರುವನಂತಪುರ: ಜಗತ್ತಿನ ಅತೀ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನನ್ನೂ ಕೋವಿಡ್, ಆರ್ಥಿಕ ನಷ್ಟದಿಂದ ತಬ್ಬಿಬ್ಬು ಮಾಡಿದೆ.
ಲಾಕ್ಡೌನ್ ಪರಿಣಾಮ ದೇಗುಲ ಬಂದ್ ಆಗಿದ್ದರಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈಗ ಸಿಬಂದಿಗೆ ಸಂಬಳ ನೀಡಲೂ ಪರದಾಡುತ್ತಿದೆ.
ಲಾಕ್ಡೌನ್ ಅವಧಿಯಲ್ಲಿ ಟಿಟಿಡಿ ಸುಮಾರು 300 ಕೋಟಿ ರೂ.ಗಳನ್ನು ಸಂಬಳ, ಪಿಂಚಣಿ ಮತ್ತು ಇತರ ದೈನಂದಿನ ಕೆಲಸಗಳಿಗೆ ಖರ್ಚು ಮಾಡಿದೆ.
ದೇಗುಲದ ಹೆಸರಿನಲ್ಲಿರುವ 8 ಟನ್ ಚಿನ್ನ, 14 ಸಾವಿರ ಕೋಟಿ ರೂ. ಸ್ಥಿರ ಠೇವಣಿಯನ್ನು ಮುಟ್ಟದೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಕುರಿತು ಟಿಟಿಡಿ ಸಮಾಲೋಚಿಸುತ್ತಿದೆ.
ಒಂದು ಪೈಸೆ ಆದಾಯವಿಲ್ಲ: ‘ಸಾಮಾನ್ಯ ದಿನಗಳಲ್ಲಿ ತಿರುಮಲ ದೇಗುಲಕ್ಕೆ ಸರಾಸರಿ 1 ಲಕ್ಷ ಭಕ್ತರು ಆಗಮಿಸುತ್ತಿದ್ದರು. ಮಾಸಿಕ ಆದಾಯ 200- 220 ಕೋಟಿ ರೂ. ಮುಟ್ಟುತ್ತಿತ್ತು.
50 ದಿನಗಳಿಂದ ದೇಗುಲದ ಬಾಗಿಲು ತೆಗೆಯದ ಕಾರಣ, ಒಂದು ಪೈಸೆ ಆದಾಯವೂ ಕಾಣಲಾಗಲಿಲ್ಲ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬರೆಡ್ಡಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ತಿರುಮಲ ದೇಗುಲ ಸಾರ್ವಜನಿಕರಿಗೆ ಎಂದು ತೆರೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.
ಅಯ್ಯಪ್ಪನಿಗೂ 200 ಕೋಟಿ ರೂ. ನಷ್ಟ
ಹತ್ತಿರ ಹತ್ತಿರ ಎರಡು ತಿಂಗಳ ಲಾಕ್ಡೌನ್ ಕೇವಲ ಉದ್ಯಮಿಗಳು, ಸಾಮಾನ್ಯ ವರ್ಗದವರಿಗಷ್ಟೇ ಹೊಡೆತ ನೀಡಿಲ್ಲ.
ಲಕ್ಷಾಂತರ ಭಕ್ತರನ್ನು ಕಾಣುತ್ತಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೂ 200 ಕೋಟಿ ರೂ. ಆದಾಯ ಕೊರತೆಯಾಗಿದೆ. ಕೇವಲ ಶಬರಿಮಲೆ ಮಾತ್ರವಲ್ಲ, ‘ದೇವರನಾಡು’ ಕೇರಳದ ಅಂದಾಜು 1300 ದೇಗುಲಗಳ ಆದಾಯ ಕುಸಿದಿದೆ.
‘ಶಬರಿಮಲೆಯಲ್ಲಿ ಎರಡು ತಿಂಗಳಿಂದ ಭಕ್ತರಿಗೆ ದರ್ಶನ ನಿಂತಿದೆ. ಅದ್ಧೂರಿಯಾಗಿ ನಡೆಯಬೇಕಿದ್ದ ಜಾತ್ರೆಯೂ ಮುಂದೂಡಲ್ಪಟ್ಟಿದೆ. ಅಯ್ಯಪ್ಪ ಸನ್ನಿಧಾನವೂ ಸೇರಿ ಕೇರಳದ 1300 ದೇಗುಲಗಳಲ್ಲಿ 5 ಸಾವಿರ ಅರ್ಚಕ ಸಿಬಂದಿಗೆ ಸಂಬಳ, 4 ಸಾವಿರ ಮಂದಿಗೆ ಪಿಂಚಣಿ ನೀಡಬೇಕು. ಇದಕ್ಕೆ ಮಾಸಿಕವಾಗಿ 40 ಕೋಟಿ ರೂ. ವೆಚ್ಚವಾಗುತ್ತಿದೆ’ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಆತಂಕ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು