ಮಾರಾಟಕ್ಕಿವೆ ಸಾರಿಗೆ ದತ್ತಾಂಶ!
Team Udayavani, Jul 11, 2019, 5:00 AM IST
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ
ಹೊಸದಿಲ್ಲಿ: ಕೇಂದ್ರ ಸಾರಿಗೆ ಇಲಾಖೆಯು ತನ್ನ ನಿಯಂತ್ರಣದಲ್ಲಿರುವ ದೇಶವ್ಯಾಪಿ ವಾಹನಗಳ ನೋಂದಣಿ ಮಾಹಿತಿಯ ಕಣಜವಾದ “ವಾಹನ್’ ಹಾಗೂ ದೇಶವ್ಯಾಪಿ ಚಾಲನಾ ಪರವಾನಗಿ ಮಾಹಿತಿ ಕಣಜವಾದ “ಸಾರಥಿ’ ಡೇಟಾಬೇಸ್ಗಳಲ್ಲಿನ ಸಾರ್ವಜನಿ ಕರ ಮಾಹಿತಿಗಳನ್ನು (ದತ್ತಾಂಶಗಳನ್ನು) 67 ಖಾಸಗಿ ಕಂಪೆನಿಗಳಿಗೆ ಹಾಗೂ 32 ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಿ ಈವರೆಗೆ 65 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ ಎಂದು ಹೇಳಿದೆ.
ಸಚಿವರೇ ಕೊಟ್ಟ ಉತ್ತರವಿದು!: ರಾಜ್ಯಸಭೆ ಯಲ್ಲಿನ ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ಅವರು, ಸಾರಿಗೆ ಇಲಾಖೆಯಿಂದ ದತ್ತಾಂಶ ಮಾರಾಟದಿಂದ ಸರಕಾರ ಗಳಿಸಿರುವ ಆದಾಯದ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದತ್ತಾಂಶ ಮಾರಾಟವನ್ನು ಖಚಿತಪಡಿಸಿದ್ದಾರೆ.
ಷರತ್ತುಗಳೊಂದಿಗೆ ಮಾರಾಟ “ನ್ಯಾಷನಲ್ ಇನಾ#ರ್ಮೇಟಿಕ್ಸ್ ಸೆಂಟರ್’ (ಎನ್ಐಎಸ್) ಸಹಾಯದಿಂದ ಕಾರ್ಯ ನಿರ್ವಹಿಸಲಾ ಗುತ್ತಿರುವ ವಾಹನ್ ಹಾಗೂ ಸಾರಥಿ ಡೇಟಾ ಬೇಸ್ಗಳಲ್ಲಿ ಕ್ರಮವಾಗಿ 25 ಕೋಟಿ ಹಾಗೂ 15 ಕೋಟಿ ದತ್ತಾಂಶಗಳು ಸಂಗ್ರಹವಾಗಿವೆ. ಈ ದತ್ತಾಂಶಗಳನ್ನು ವಿವಿಧ ಕಂಪೆನಿಗಳಿಗೆ ಷರತ್ತುಬದ್ಧವಾಗಿಯೇ ನೀಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳಿಗೂ ನೀಡಲಾಗಿರುವ ದತ್ತಾಂಶಗಳು ಕೇವಲ ಸಂಶೋಧನೆಗಾಗಿ ಮಾತ್ರವೇ ಬಳಸುವಂತೆ ತಾಕೀತು ಮಾಡಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ, ಸಾರ್ವಜನಿಕರ ಮಾಹಿತಿಗಳನ್ನು ಹಂಚುವ ಮೂಲಕ ಅವರ ಖಾಸಗಿತನಕ್ಕೆ ಚ್ಯುತಿ ತಂದಂತೆ ಆಗುವುದಿಲ್ಲವೇ ಎಂಬ ನೈತಿಕ ಪ್ರಶ್ನೆಯೂ ಎದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ