ಸರಸ್ವತಿ ಪೂಜೆ ಕಾರಣ ಬಜೆಟ್ ದಿನ ನಾವು ಸಂಸತ್ತಿಗೆ ಬರಲ್ಲ : TMC
Team Udayavani, Jan 30, 2017, 12:11 PM IST
ಹೊಸದಿಲ್ಲಿ : ಫೆ.1ರ ಬಜೆಟ್ ಮಂಡನೆಯ ದಿನದಂದು ತೃಣಮೂಲ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಹಾಜರಿರುವುದಿಲ್ಲ. ಬಹುಕೋಟಿ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ತೃಣಮೂಲ ಕಾಂಗ್ರೆಸ್ನ ಇಬ್ಬರು ಸಂಸದರನ್ನು ಬಂಧಿಸಿರುವುದೇ ಇದಕ್ಕೆ ಕಾರಣಎಂದು ತಿಳಿಯಲಾಗಿದೆ.
ಆದರೆ ತೃಣಮೂಲ ಪಕ್ಷ ಮಾತ್ರ ಕೊಟ್ಟಿರುವ ಕಾರಣವೇ ಬೇರೆ ಇದೆ: ಅದೆಂದರೆ ಅಂದು, ಫೆ.1ರಂದು ಸರಸ್ವತಿ ಪೂಜೆ ಇರುವುದರಿಂದ ತಾನು ಸಂಸತ್ತಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅದು ಹೇಳಿದೆ !
ಇದೇ ವೇಳೆ, ಇಂದು ಸಂಜೆ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬಜೆಟ್ ಅಧಿವೇಶನದ ಕುರಿತಾಗಿ ಕರೆದಿರುವ ಸರ್ವ ಪಕ್ಷ ಸಭೆಯಲ್ಲೂ ತಾನು ಭಾಗವಹಿಸುವುದಿಲ್ಲ ಎಂದು ತೃಣಮೂಲ ಪಕ್ಷ ಹೇಳಿದೆ. ಬಜೆಟ್ ಅಧಿವೇಶನ ನಾಳೆ ಮಂಗಳವಾರದಿಂದ ಆರಂಭಗೊಳ್ಳಲಿದೆ.
“ಸರಸ್ವತಿ ಪೂಜೆ ನಮಗೆ ಬಂಗಾಲದಲ್ಲಿ ಬಹುದೊಡ್ಡ ದಿನವಾಗಿದೆ. ಅಂದು ನಾವು ಯಾರೂ ಕೆಲಸ ಮಾಡುವುದಿಲ್ಲ ಮಾತ್ರವಲ್ಲ ಕೆಲಸ ಕಾರ್ಯಗಳ ಸಲಕರಣೆಗಳನ್ನು ಕೂಡ ಮುಟ್ಟುವುದಿಲ್ಲ. ಏಕೆಂದರೆ ಸರಸ್ವತಿ ಪೂಜೆ ಎನ್ನುವುದು ನಮಗೆ ಧಾರ್ಮಿಕ ಉತ್ಸವಗಳಿಗಿಂತಲೂ ಮಿಗಿಲಾದುದು; ಇದು ಬಂಗಾಲದ ಸಾಮಾಜಿಕ-ಸಾಂಸ್ಕೃತಿಕ ಉತ್ಸವವಾಗಿದೆ’ ಎಂದು ಟಿಎಂಸಿ ನಾಯಕ ಹಾಗೂ ಸಂಸದರಾಗಿರುವ Derek O’Brien ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ