ಟಿಎಂಸಿಗೆ ರಾಹುಲ್ ಪ್ರಧಾನಿಯಾಗುವುದು ಬೇಕಿಲ್ಲ : ಕಾಂಗ್ರೆಸ್ ನಾಯಕ
Team Udayavani, Jan 23, 2019, 12:13 PM IST
ಕೋಲ್ಕತ : ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ರಾಹುಲ್ ಗಾಂಧಿ ನಾಯಕತ್ವವನ್ನು ಮರೆಮಾಡಲು ಯತ್ನಿಸುತ್ತಿದೆ; ಟಿಎಂಸಿಗೆ ರಾಹುಲ್ ದೇಶದ ಪ್ರಧಾನಿಯಾಗುವುದು ಬೇಕಿಲ್ಲ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಆರೋಪಿಸಿದ್ದಾರೆ.
ಕೋಲ್ಕತದಲ್ಲಿ ಟಿಎಂಸಿ ನೇತೃತ್ವದಲ್ಲಿ ಮೆಗಾ ವಿಪಕ್ಷ ರಾಲಿ ನಡೆದ ಎರಡೇ ದಿನಗಳ ಬಳಿಕ ಗೊಗೋಯ್ ಅವರಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. ಸೋನಿಯಾ ಗಾಂಧಿ ಅವರು ರಾಲಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅಭಿಷೇಕ್ ಸಿಂಗ್ವಿ ಅವರನ್ನು ಕಾಂಗ್ರೆಸ್ ಪ್ರತಿನಿಧಿಯಾಗಿ ಕಳುಹಿಸಿದ್ದರು.
ಪಶ್ಚಿಮ ಬಂಗಾಲದ ಬೀರ್ಭೂಮ್ ಜಿಲ್ಲೆಯ ರಾಮಪುರ್ಹತ್ ನಲ್ಲಿ ನಡೆದ ರಾಲಿಯಲ್ಲಿ ಗೊಗೋಯ್ ಅವರು, 2019ರ ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರೇ ದೇಶದ ಮುಂದಿನ ಪ್ರಧಾನಿ ಆಗುತ್ತಾರೆ ಎಂದು ಹೇಳಿದರು.