ಯುವ ಸೇನಾಧಿಕಾರಿ ಹತ್ಯೆ: 3 ಹಿಜ್ಬುಲ್ ಶಂಕಿತರ ಪೋಟೋ ಬಿಡುಗಡೆ
Team Udayavani, May 12, 2017, 12:23 PM IST
ಜಮ್ಮು ಕಾಶ್ಮೀರ : 22ರ ಹರೆಯದ ಕಾಶ್ಮೀರದ ಭಾರತೀಯ ಸೇನಾ ಅಧಿಕಾರಿಯನ್ನು ಅಪಹರಿಸಿ ಹತ್ಯೆಗೈದ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮೂವರು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ. ಅಂತೆಯೇ ಅವರ ಫೋಟೋಗಳನ್ನು ಮಾಧ್ಯಮಕ್ಕೆ ಬಿಡುಗಡೆಮಾಡಿದ್ದಾರೆ ಮಾತ್ರವಲ್ಲದೆ ಅವರ ಚಿತ್ರಗಳಿರುವ ಪೋಸ್ಟರ್ಗಳನ್ನು ಸಾರ್ವಜನಿಕವಾಗಿ ಹಾಕಿಸಿದ್ದಾರೆ.
ಪೊಲೀಸರು ಗುರುತಿಸಿರುವ ಹಂತಕರ ಹೆಸರು ಇಂತಿದೆ : ಇಷ್ಫಾಕ್ ಅಹ್ಮದ್ ಠೊಕರ್, ಗಯಾಸ್ ಉಲ್ ಇಸ್ಲಾಮ್ ಮತ್ತು ಅಬ್ಟಾಸ್ ಅಹ್ಮದ್ ಭಟ್.
ಈ ಶಂಕಿತ ಉಗ್ರರು ಎಲ್ಲಿ ಅಡಗಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದವರಿಗೆ ಇನಾಮು ನೀಡಲಾಗುವುದು ಎಂದು ಪೊಲೀಸರು ಪ್ರಕಟಿಸಿದ್ದಾರೆ.
ಮೂಲತಃ ದಕ್ಷಿಣ ಕಾಶ್ಮೀರದ ಕುಲಗಾಂವ್ನ ನಿವಾಸಿ, 22ರ ಹರೆಯದ ರಾಜಪುತಾನ ರೈಫಲ್ಸ್ ಅಧಿಕಾರಿ, ಉಮರ್ ಫಯಾಜ್ ಅವರು ಶೋಪಿಯಾನ್ನಲ್ಲಿನ ತಮ್ಮ ಸೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ಶಂಕಿತ ಹಿಜ್ಬುಲ್ ಮುಜಾಹಿದೀನ್ ಉಗ್ರರು ಕಳೆದ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಅಪಹರಿಸಿ ಬಳಿಕ ಹತ್ಯೆಗೈದಿದ್ದರು. ಫಯಾಜ್ ಅವರ ಗುಂಡುಗಳು ತುಂಬಿದ್ದ ಮೃತ ದೇಹವು ಮರುದಿನ ಬೆಳಗ್ಗೆ ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು