ರೇಪ್ ಆರೋಪಿ ಶಾಸಕನ ಪತ್ನಿಯಿಂದ 1 ಕೋಟಿ ಕೇಳಿದ ನಕಲಿ CBI ಅಧಿಕಾರಿಗಳು
Team Udayavani, May 11, 2018, 3:38 PM IST
ಲಕ್ನೋ : ಉನ್ನಾವೋ ಗ್ಯಾಂಗ್ ರೇಪ್ ಕೇಸ್ ನಲ್ಲಿ ಕ್ಲೀನ್ ಚಿಟ್ ಪಡೆಯಲು ಒಂದು ಕೋಟಿ ರೂ. ಕೊಡಬೇಕು ಎಂದು ಜೈಲು ಪಾಲಾಗಿರುವ ಬಂಗರಮಾವು ಕ್ಷೇತ್ರದ ರೇಪ್ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನ ಪತ್ನಿ ಸಂಗೀತಾ ಅವರಲ್ಲಿ ಬೇಡಿಕೆ ಮಂಡಿಸಿದ್ದ ಇಬ್ಬರು ನಕಲಿ ಸಿಬಿಐ ಅಧಿಕಾರಿ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೇಪ್ ಆರೋಪಿ ಬಿಜೆಪಿ ಶಾಸಕ ಸೆಂಗರ್ ಅವರನ್ನು ಪ್ರಕೃತ ಸೀತಾಪುರ ಜೈಲಿನಲ್ಲಿ ಇರಿಸಲಾಗಿದೆ.
ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಶಾಸಕ ಸೆಂಗರ್ ಪತ್ನಿ ಸಂಗೀತಾ ಅವರಿಂದ 1 ಕೋಟಿ ರೂ. ಕೇಳಿದ್ದ ಇಬ್ಬರು ಬಂಧಿತ ವ್ಯಕ್ತಿಗಳನ್ನು ಗೋಸಾಯಿಗಂಜ್ನ ಆಲೋಕ್ ದ್ವಿವೇದಿ ಮತ್ತು ಆತನ ಸಹವರ್ತಿಯಾಗಿರುವ ದೇವರಿಯಾ ನಿವಾಸಿ ವಿಜಯ ರಾವತ್ ಎಂದು ಗುರುತಿಸಲಾಗಿದೆ.
ರೇಪ್ ಆರೋಪಿ ಬಿಜೆಪಿ ಶಾಸಕ ಸೆಂಗರ್ನ ಪತ್ನಿ ಸಂಗೀತಾ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು, ‘ಇಬ್ಬರು ವ್ಯಕ್ತಿಗಳು ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ನನ್ನ ಪತಿಗೆ ರೇಪ್ ಕೇಸ್ನಲ್ಲಿ ಕ್ಲೀನ್ ಚಿಟ್ ದೊರಕಿಸಿಕೊಡಲು 1 ಕೋಟಿ ರೂ. ಕೊಡಬೇಕೆಂದು ಕೇಳಿದ್ದಾರೆ’ ಎಂಬುದಾಗಿ ಮೊನ್ನೆ ಬುಧವಾರ ದೂರು ನೀಡಿದ್ದರು ಎಂದು ಗಾಜಿಪುರ ಎಸ್ಎಚ್ಓ ಸುಜೀತ್ ಕುಮಾರ್ ರಾಯ್ ಹೇಳಿದ್ದಾರೆ.
ಸಂಗೀತಾ ಅವರ ದೂರಿನ ಆಧಾರದಲ್ಲಿ ಮಾಹಿತಿ ಕಲೆಹಾಕಿ ನಕಲಿ ಸಿಬಿಐ ಅಧಿಕಾರಿಗಳನ್ನು ನಾವು ಬಂಧಿಸಿದೆವು ಎಂದು ಎಸ್ಎಚ್ಓ ರಾಯ್ ತಿಳಿಸಿದ್ದಾರೆ.
ಬಂಧಿತ “ನಕಲಿ ಸಿಬಿಐ ಅಧಿಕಾರಿ’ ದ್ವಿವೇದಿಯನ್ನು ಪ್ರಶ್ನಿಸಿದಾಗ ಆತ “ನಾನು ಅವಧ್ ವಿವಿಯ ವಿಜ್ಞಾನ ಪದವೀಧರ. ಬ್ರೈಟ್ ಸ್ಟೂಡೆಂಟ್ ಆಗಿದ್ದೆ; ಆದರೆ ನನಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಶಾಸಕ ಸೆಂಗರ್ ಸಿರಿವಂತ ಕುಟುಂಬದವರೆಂದು ಭಾವಿಸಿದ್ದೆ. ಹಾಗಾಗಿ ಅವರಿಂದ ಕೋಟಿಗೂ ಕಡಿಮೆ ಇಲ್ಲದ ಹಣವನ್ನು ಸುಲಿಗೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದೆ; ಆ ಪ್ರಕಾರ ನಾನು ಸೆಂಗರ್ ಪತ್ನಿ ಸಂಗೀತಾ ಅವರಿಗೆ ಕರೆ ಮಾಡಿ ನಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡೆ. ಮೇ 5ರಂದು ನಾನು ಆಕೆಗೆ ಮೊದಲ ಕರೆ ಮಾಡಿದೆ; ಅನಂತರ ಪುನಃ ಮೇ 6ರಂದು ಎರಡನೇ ಕರೆ ಮಾಡಿದೆ’ ಎಂದು ಬಾಯಿಬಿಟ್ಟಿದ್ದಾನೆ ಎಂದು ಎಸ್ಎಚ್ಓ ರಾಯ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ