ಅಮೆರಿಕ – ಇರಾನ್ ನಡುವಿನ ಸಂಘರ್ಷ: ತೈಲ ಸಂಕಷ್ಟ ಆರಂಭ
Team Udayavani, Jan 7, 2020, 6:39 AM IST
ಮುಂಬಯಿ/ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಭಾರತ ಸಹಿತ ಜಗತ್ತಿನ ಹಲವಾರು ಷೇರು, ತೈಲ ಮಾರುಕಟ್ಟೆಗಳು ತಲ್ಲಣ ಅನುಭವಿಸುತ್ತಿವೆ. ಭಾರತದಲ್ಲಿ ನಾಲ್ಕೈದು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಇದರ ನಡುವೆಯೇ ಸೋಮವಾರ ಷೇರುಪೇಟೆ ಭಾರೀ ಕುಸಿತ ಕಂಡಿದೆೆ. ಚಿನ್ನದ ಬೆಲೆಯೂ ಗಗನಮುಖೀಯಾಗುತ್ತಿದೆ.
ಈ ಎರಡು ರಾಷ್ಟ್ರಗಳ ನಡುವಿನ ಜಗಳದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 70 ಡಾಲರ್ಗೆ ತಲುಪಿದೆ. ಅದರ ಛಾಯೆ ದೇಶದ ತೈಲೋತ್ಪನ್ನ ಮಾರುಕಟ್ಟೆಯಲ್ಲಿಯೂ ಅನುರಣಿಸಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 15 ಪೈಸೆ, ಡೀಸೆಲ್ ಬೆಲೆ ಲೀ.ಗೆ 17 ಪೈಸೆಯಷ್ಟು ಹೆಚ್ಚಾಗಿದೆ. ದಿಲ್ಲಿಯ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75.69 ರೂ.ಗೆ ತಲುಪಿದೆ. 2018ರ ಬಳಿಕ ಇದು ಅತ್ಯಂತ ಗರಿಷ್ಠ ಮಟ್ಟ ವಾಗಿದೆ. ಡೀಸೆಲ್ ಬೆಲೆ 68.68 ರೂ.ಗೆ ಏರಿದೆ. ಇದು ಸತತ ಐದನೇ ದಿನ ಬೆಲೆ ಏರಿಕೆಯಾಗಿದೆ.
ಷೇರುಪೇಟೆ ಹೊಯ್ದಾಟ
ಭಾರತ ಸಹಿತ ವಿಶ್ವದ ಹಲವು ರಾಷ್ಟ್ರಗಳ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಹೊಯ್ದಾಟ ವಾಗಿದೆ. ಬಿಎಸ್ಸಿ ಸೆನ್ಸೆಕ್ಸ್ ಒಂದೇ ದಿನ 788 ಅಂಕ ಕುಸಿದು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಇದರಿಂದಾಗಿ ಒಟ್ಟಾರೆ ಮೂರು ಗಂಟೆಗಳ ಅವಧಿಯಲ್ಲಿ ಬಾಂಬೆ ಸ್ಟಾಕ್ಎಕ್ಸ್ಚೇಂಜ್ ಹೂಡಿಕೆದಾರರಿಗೆ ಮೂರು ಲಕ್ಷ ಕೋಟಿ ರೂ.ನಷ್ಟವಾಗಿದೆ.
13 ಪೈಸೆ ಕುಸಿತ
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 13 ಪೈಸೆ ಕುಸಿದಿದೆ. ದಿನದ ಆರಂಭದಲ್ಲಿ ಡಾಲರ್ ಎದುರು 72.03 ರೂ.ಗಳಿದ್ದ ರೂಪಾಯಿ ಅಂತಿಮವಾಗಿ 71.93 ರೂ.ಗಳಲ್ಲಿ ಮುಕ್ತಾಯವಾಯಿತು.
10 ಗ್ರಾಂ ಚಿನ್ನಕ್ಕೆ 720 ರೂ. ಏರಿಕೆ
ದಿಲ್ಲಿ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 720 ರೂ. ಏರಿಕೆಯಾಗಿದೆ. ಹೀಗಾಗಿ ಚಿನ್ನದ ಬೆಲೆ 41,730 ರೂ.ಗೆ ಜಿಗಿದಿದೆ. ಕಳೆದ ಶುಕ್ರವಾರ (ಜ.3) ಪ್ರತಿ 10 ಗ್ರಾಂ ಚಿನ್ನಕ್ಕೆ 41,010 ರೂ. ಆಗಿತ್ತು. ಪ್ರತಿ ಕೆ.ಜಿ. ಬೆಳ್ಳಿ ಬೆಲೆ 1,105 ರೂ. ಏರಿಕೆಯಾಗಿದೆ. ಹೀಗಾಗಿ 48,325 ರೂ.ಗಳಿಂದ 49,430 ರೂ.ಗೆ ಜಿಗಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಔನ್ಸ್ ಚಿನ್ನ 1,575 ಅಮೆರಿಕನ್ ಡಾಲರ್ಗೆ ಜಿಗಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ