
WhatsApp ನಕಲಿ ಸಂದೇಶ ಪತ್ತೆಹಚ್ಚುವ ತಂತ್ರಜ್ಞಾನ ಕಂಡುಕೊಳ್ಳಲಿ..
Team Udayavani, Aug 21, 2018, 4:22 PM IST

ನವದೆಹಲಿ:ಗುಂಪು ಥಳಿತಕ್ಕೆ ಕಾರಣವಾಗುವಂತಹ ನಕಲಿ ಸಂದೇಶಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ವಿಧಾನ (ಟೂಲ್ಸ್)ವನ್ನು ಡೆವಲಪ್ ಮಾಡುವುದಾಗಿ ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿರುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.
ವಾಟ್ಸ್ ಆ್ಯಪ್ ಸಿಇಒ ಕ್ರಿಸ್ ಡೇನಿಯಲ್ಸ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ರೀತಿಯ ನಕಲಿ ಸಂದೇಶಗಳನ್ನು ಹಾಕಿದ ಮೂಲ ಕಂಡುಹಿಡಿಯಲು ಅನುಕೂಲವಾಗುವಂತಹ ತಂತ್ರಜ್ಞಾನ ಡೆವಲಪ್ ಮಾಡುವಂತೆ ವ್ಯಾಟ್ಸ್ ಆ್ಯಪ್ ಸಿಇಒಗೆ ಸೂಚಿಸಿರುವುದಾಗಿ ಹೇಳಿರುವುದಾಗಿ ರಾಯಟರ್ಸ್ ವರದಿ ಮಾಡಿದೆ.
ನಕಲಿ ಸಂದೇಶಗಳ ಪತ್ತೆಗಾಗಿ ರಾಕೆಟ್ ವಿಜ್ಞಾನದ ಅಗತ್ಯವೇನಿಲ್ಲ ಎಂದ ರವಿಶಂಕರ್ ಪ್ರಸಾದ್, ಆ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿಪಡಿಸುವಲ್ಲಿ ವ್ಯಾಟ್ಸ್ ಆ್ಯಪ್ ಭಾರತದ ಕಾನೂನು ಸಂಸ್ಥೆಯ ಜೊತೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಎಲ್ಲಾ ರೀತಿಯಿಂದಲೂ ವ್ಯಾಟ್ಸ್ ಆ್ಯಪ್ ಭಾರತದ ಕಾನೂನನ್ನು ಅನುಸರಿಸುವ ಮೂಲಕ ಕಾರ್ಯನಿರ್ವಹಿಸಬೇಕಾಗಿದೆ ಎಂದು ವ್ಯಾಟ್ಸ್ ಆ್ಯಪ್ ಸಿಇಒ ಡೇನಿಯಲ್ ಜೊತೆ ಮಾತುಕತೆ ವೇಳೆ ಸ್ಪಷ್ಟಪಡಿಸಿರುವುದಾಗಿ ಹೇಳಿದರು.
ಗುಂಪು ಥಳಿತ ಅಥವಾ ಅಶ್ಲೀಲತೆ, ಹತ್ಯೆಯನ್ನು ಪ್ರಚೋದಿಸುವಂತಹ, ಭೀತಿಗೊಳಿಸುವ ಬೆಳವಣಿಗೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ವ್ಯಾಟ್ಸ್ ಆ್ಯಪ್ ಮೊದಲು ಇಂತಹ ಸಮಸ್ಯೆಯನ್ನು ನಿವಾರಿಸಲು ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ತೆರೆಗೆ ಬಂತು ಡಾಲಿ ಧನಂಜಯ ಅಭಿನಯದ ‘ಗುರುದೇವ್ ಹೊಯ್ಸಳ’

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ