ನೋಟು ಕಷ್ಟ ಸಹಿಸಿಕೊಂಡ ಜನರಿಗೆ ಬಿಜೆಪಿ ಬಹುಪರಾಕ್‌


Team Udayavani, Jan 8, 2017, 3:50 AM IST

07-NT-3.jpg

ಹೊಸದಿಲ್ಲಿ: ಅಪನಗದೀಕರಣದಿಂದ ತಾತ್ಕಾಲಿಕ ತೊಂದರೆ ಎದುರಾದರೂ ಅದನ್ನು ಉತ್ಸಾಹದಿಂದಲೇ ಎದುರಿಸಿದ ಜನರ ನಡವಳಿಕೆಯನ್ನು “ಪವಿತ್ರ ಆಂದೋಲನ’ ಎಂದು ಬಣ್ಣಿಸಿರುವ ಬಿಜೆಪಿ, ಪ್ರತಿಪಕ್ಷಗಳು ದೇಶದಲ್ಲಿನ ಧನಾತ್ಮಕ ವಾತಾವರಣವನ್ನೇ ಹಾಳು ಮಾಡುತ್ತಿವೆ ಎಂದು ಹರಿಹಾಯ್ದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ನೋಟು ರದ್ದತಿ ನಿರ್ಧಾರ ಬಡವರ ಹಿತದೃಷ್ಟಿಯಿಂದ ಕೈಗೊಂಡ ಅತ್ಯಂತ ಧೈರ್ಯಶಾಲಿ ನಡೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಶನಿವಾರ ಆರ್ಥಿಕ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು, ಅದರಲ್ಲಿ ಈ ಅಂಶಗಳಿವೆ.

ಇದೇ ವೇಳೆ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಡವರ ಜೀವನ ಗುಣಮಟ್ಟ ಬದಲಿಸುವುದು ನಮ್ಮ ಬದ್ಧತೆ. ಭ್ರಷ್ಟಾಚಾರ ಎಂಬುದು ಬೃಹತ್‌ ಸಾಮಾಜಿಕ ಸಮಸ್ಯೆ. ಅದನ್ನು ಹತ್ತಿಕ್ಕಲು ಅನಿಯಂತ್ರಿತ ಹಣದ ಹರಿವು ತೊಡಕಾಗಿತ್ತು. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧದ ದೀರ್ಘಾವಧಿ ಕ್ರಮವೇ ನೋಟು ರದ್ದತಿ ಎಂದು ಹೇಳಿದರು. ಬಡವರ ಮನಗೆಲ್ಲಲು ಸಂಘಟನಾ ಬಲ ಬಳಸಿಕೊಳ್ಳಿ. ಜನತೆಯ ಸೇವೆ ಎಂಬುದು ದೇವರ ಸೇವೆ ಇದ್ದಂತೆ ಎಂದು ಪಕ್ಷದ ಮುಖಂಡರನ್ನು ಹುರಿದುಂಬಿಸಿದರು. ಅಲ್ಲದೆ, ಬಡವರ ಬಾಳು ಉದ್ಧಾರಕ್ಕೆ ಕೈಗೊಂಡ ದೀರ್ಘಾವಧಿ ಪರಿಣಾಮದ ಯೋಜನೆ ಇದು ಎಂದು ಮೋದಿ ಸಮರ್ಥಿಸಿಕೊಂಡರು.

ಕಾರ್ಯಕಾರಿಣಿ ನಿರ್ಣಯದಲ್ಲಿ ಏನೇನಿದೆ?
ನೋಟು ನಿಷೇಧದ ಬಳಿಕ ದೇಶದಲ್ಲಿ ಪವಿತ್ರ ಆಂದೋಲನ ನಡೆದಿದೆ. ತಾತ್ಕಾಲಿಕ ತೊಂದರೆಗಳನ್ನು ಮೆಟ್ಟಿ ನಿಂತು ಶ್ರೀಸಾಮಾನ್ಯರು ಉತ್ಸಾಹ ಹಾಗೂ ಧನಾತ್ಮಕ ಶಕ್ತಿಯೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಪ್ರತಿಪಕ್ಷಗಳು ಧನಾತ್ಮಕ, ವಿಧ್ವಂಸಕ ಶಕ್ತಿ ಮೂಲಕ ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರ ತರಲು, ದೇಶದಲ್ಲಿನ ಧನಾತ್ಮಕ ವಾತಾವರಣ ಹಾಳುಗೆಡವಲು ಯತ್ನಿಸಿವೆ.

ಕಪ್ಪು ಹಣ ತನ್ನ ಅನಾಮಧೇಯತೆಯನ್ನು ಕಳೆದುಕೊಂಡಿದೆ. ಬ್ಯಾಂಕುಗಳಲ್ಲಿ ಕಾಳಧನ ಜಮೆಯಾಗಿದೆ. ಅನೌಪಚಾರಿಕ ಆರ್ಥಿಕತೆಯು ಔಪಚಾರಿಕ ಆರ್ಥಿಕತೆ ಜತೆ ಈಗ ಹೆಚ್ಚಾಗಿ ವಿಲೀನಗೊಳ್ಳುತ್ತಿದೆ. ಇದರಿಂದ ರಾಜ್ಯಗಳು ಹಾಗೂ ಕೇಂದ್ರ ಸರಕಾರಗಳಿಗೆ ಆದಾಯ ಹೆಚ್ಚಾಗಲಿದೆ. ಬೃಹತ್‌ ಹಾಗೂ ಸ್ವತ್ಛ ಜಿಡಿಪಿಗೆ ಇದು ಕಾರಣವಾಗಲಿದೆ.

ಅಪನಗದೀಕರಣಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. 50 ದಿನಗಳ ಅವಧಿಯಲ್ಲಿ ದೇಶದ ಯಾವುದೇ ಕಡೆ ಒಂದೇ ಒಂದು ಬೃಹತ್‌ ಅಹಿತಕರ ಘಟನೆ ನಡೆದಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ. ದೇಶಲ್ಲೆಲ್ಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ.

ನೋಟು ನಿಷೇಧವನ್ನು ದಿಢೀರನೇ, ಚಿಂತನೆ ಮಾಡದೇ ಕೈಗೊಳ್ಳಲಾಗಿದೆ ಎಂಬುದು ನಿಜವಲ್ಲ. ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ನಿರ್ಧಾರ ಮಾಡಲಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.