ವಂದೇ ಭಾರತ್ ರೈಲು ಹಳಿ ಇಕ್ಕೆಲೆಯಲ್ಲಿ ಬೇಲಿ; ಪ್ರಾಣಿಗಳು ಬರದಂತೆ ತಡೆಯಲು ಕ್ರಮ
2024ರೊಳಗೆ ಕಾಮಗಾರಿ ಪೂರ್ಣ
Team Udayavani, Oct 8, 2022, 8:30 PM IST
ನವದೆಹಲಿ: ಮುಂಬೈನಿಂದ ಗುಜರಾತ್ನ ಗಾಂಧಿನಗರ ವರೆಗೆ ವಂದೇ ಭಾರತ್ ರೈಲು ಸಂಚರಿಸುವ ಹಳಿಯ ಎರಡೂ ಬದಿಗಳಲ್ಲಿ ಬೇಲಿ ಹಾಕಲು ಪಶ್ಚಿಮ ರೈಲ್ವೇ ತೀರ್ಮಾನಿಸಿದೆ.
ಗುರುವಾರ (ಅ.6), ಶುಕ್ರವಾರ (ಅ.7) ಎಮ್ಮೆಗಳಿಗೆ ಹಾಗೂ ಹಸುವಿಗೆ ವಂದೇಭಾರತ್ ಸೆಮಿ ಹೈ ಸ್ಪೀಡ್ ರೈಲು ಡಿಕ್ಕಿ ಹೊಡೆದ ಬಳಿಕ ಈ ಚಿಂತನೆ ನಡೆಸಲಾಗಿದೆ.
ಶೀಘ್ರವೇ ಬೇಲಿ ಹಾಕುವ ಕಾಮಗಾರಿ ಆರಂಭವಾಗಲಿದ್ದು, 2024ರೊಳಗೆ ಸಂಪೂರ್ಣವಾಗಲಿದೆ ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಹಳ್ಳಿ ಜನತೆಗೆ ಅರಿವು ಮೂಡಿಸಲು ಸ್ಥಳೀಯ ರೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಗ್ರಾಮಗಳ ಅಧ್ಯಕ್ಷರೊಂದಿಗೂ ಚರ್ಚಿಸಲು ಹೇಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಕ್ರವೇ ಜಾಮ್:
ಇದೇ ವೇಳೆ, ನವದೆಹಲಿಯಿಂದ ವಾರಾಣಸಿ ಹೊರಟಿದ್ದ ವಂದೇ ಭಾರತ್ ರೈಲಿನ ಚಕ್ರವೇ ಜಾಮ್ ಆದ ಪ್ರಕರಣ ಬೆಳಕಿಗೆ ಬಂದಿದೆ. ಶನಿವಾರ ರೈಲು ಉತ್ತರ ಪ್ರದೇಶದ ದನೌರ್ ಮತ್ತು ವಾಯರ್ ರೈಲ್ವೆ ನಿಲ್ದಾಣದ ಮಧ್ಯದಲ್ಲಿದ್ದ ಸಮಯದಲ್ಲಿ ಒಂದು ಬೋಗಿಯ ಚಕ್ರಗಳೇ ಜಾಮ್ ಆಗಿವೆ. ಪರಿಣತರ ಸಲಹೆಯಂತೆ ರೈಲನ್ನು 20ಕಿ.ಮೀ. ದೂರದ ಖುರ್ಜಾ ರೈಲು ನಿಲ್ದಾಣದವರೆಗೆ ಸಂಚರಿಸುವಂತೆ ಮಾಡಿ, ನಂತರ ಪ್ರಯಾಣಿಕರನ್ನು ಶತಾಬ್ದಿ ರೈಲಿನಲ್ಲಿ ವಾರಾಣಸಿಗೆ ಕಳುಹಿಸಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ