ಹೆಂಡತಿ ನೋಡಿಕೊಳ್ಳಲು ಸಾಧ್ಯವಾಗದವರಿಂದ ಮತ್ತೂಬ್ಬರ ಬಗ್ಗೆ ಸೀಡಿ
Team Udayavani, Nov 18, 2017, 8:41 AM IST
ತಮ್ಮ ವಿರುದ್ಧ ಅಶ್ಲೀಲ ಭಂಗಿಯ ಸೀಡಿಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ನೇರವಾಗಿ ಪ್ರಧಾನಿ ಮೋದಿ ವಿರುದ್ಧವೇ ಟೀಕೆ ಮಾಡಿದ್ದಾರೆ. ಟ್ವಿಟರ್ನಲ್ಲಿ ಪದ್ಯದ ರೀತಿಯಲ್ಲಿ ಟೀಕೆ ಮಾಡಿರುವ ಅವರು “ಶ್ರೀರಾಮನು ಸೀತೆಗೆ ಹೇಳುತ್ತಾನೆ: ಎಂಥಾ ಕಲಿಯುಗ ಬರುತ್ತದೆಂದರೆ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಾಗದವರು ಮತ್ತೂಬ್ಬರ ಬಗ್ಗೆ ಸೀಡಿ ಮಾಡುತ್ತಾರೆ. ರಾಮನ ಮೂರ್ತಿ ಟೆಂಟ್ನಲ್ಲಿದ್ದರೆ, ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಗೆ ದೇಗುಲ ನಿರ್ಮಿಸುತ್ತಾರೆ. ಒಬ್ಬ ಬ್ರಿಟೀಷನನ್ನು ಕೊಲ್ಲಲು ಸಾಧ್ಯವಾಗದವರು ಮಹಾತ್ಮನನ್ನು ಕೊಲ್ಲುತ್ತಾರೆ. ದಲಿತರನ್ನು ತುಳಿಯುವುದರ ಜತೆಗೆ ಹಿಂದೂ – ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಾರೆ. ಗೋವನ್ನು ತಾಯಿ ಎನ್ನುತ್ತಲೇ ಅದರ ಮಾಂಸವನ್ನು ಮಾರಾಟ ಮಾಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ.